ಕ್ರೈಂ ನ್ಯೂಸ್

ಪ್ರೀತಿಯಲ್ಲಿ ಆರಂಭಗೊಂಡ ವೈವಾಹಿಕ ಜೀವನ, ದುರಂತದೊಂದಿಗೆ ಅಂತ್ಯ

ಸುದ್ದಿಲೈವ್/ಹೊಳೆಹೊನ್ನೂರು

ಕೈಕಾಲು ಬಿಗಿದು ವಿವಾಹಿತ ಮಹಿಳೆಯೋರ್ವಳು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಈ ಹಿನ್ನಲೆಯಲ್ಲಿ ಮಹಿಳೆಯ ಪತಿ, ಮೈದುನ ಹಾಗೂ ಅತ್ತೆಯನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಚೀಲೂರಿನ ಯುವತಿ ನಂದಿನಿ(35) ಎಂಬುವರಿಗೆ ಕಳೆದ 10 ವರ್ಷದ ಹಿಂದೆ ಹೊಳೆಹೊನ್ನೂರು ಗ್ರಾಮದ ತಡಸ ನಿವಾಸಿ ಮಾಂತೇಶ್ (30)  ನಡುವೆ ಪ್ರೀತಿ ಹುಟ್ಟಿತ್ತು. ಕಾಲೇಜಿಗೆ ಹೋಗುತ್ತಿದ್ದ ವೇಳೆ ನಂದಿನಿಯನ್ನ ಪ್ರೇಮಿಸಿದ್ದ ಮಾಂತೇಶ್ ನಂದಿನಿಯ ಮನೆಯವರ ವಿರುದ್ಧವೂ ಮದುವೆಯಾಗಿದ್ದ ಎಂದು ಮೃತ ಕುಟುಂಬಸ್ಥರು ಆರೋಪಿಸಿದ್ದಾರೆ.

ಮದುವೆಯ ನಂತರ ಎಲ್ಲವೂ ಚೆನ್ನಾಗಿಯೇ ನಡೆದಿತ್ತು. ಮದುವೆ ಆದ ನಂತರ ನಂದಿನಿಯನ್ನ ಹೆಚ್ಚಾಗಿ ತವರು ಮನೆಗೆ ಕಳುಹಿಸದ ಪತಿಯ ವಿರುದ್ಧ ಆಕ್ಷೇಪಣೆಗಳು ಕೇಳಿ ಬಂದಿತ್ತು. ಈಗ ಪತಿ ಮಾಂತೇಶ್, ಮೈದುನಾ ಕಾಂತರಾಜು ಮತ್ತು ಅತ್ತೆ ಮಂಜಮ್ಮನವರ ಕಿರುಕುಳ ಮತ್ತು ಕಲಹದಿಂದ ಬೇಸತ್ತು ನಂದಿನಿ ಸಾವನ್ನಪ್ಪಿದ್ದಾಳೆ ಎಂದು ಮೃತಳ ತವರು ಕುಟುಂಬ ಆರೋಪಿಸಿದೆ.

ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ವಿವಾಹಿತೆ ಮಹಿಳೆಯ ಕೈ ಕಟ್ಟಿರುವುದು ಕೊಲೆಯ ಅನುಮಾನಕ್ಕೆ ಕಾರಣವಾಗಿದೆ. ನಿನ್ನೆ ಬೆಳಿಗ್ಗೆ 11-30 ರ ವೇಳೆಯಲ್ಲಿ ನಂದಿನಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಸಂಜೆಯ ವೇಳೆಗೆ ನಮಗೆ ವಿಷಯ ತಿಳಿದು ಬಂದಿದೆ ಎಂದು ಕುಟುಂಬ ತಿಳಿಸಿದೆ.

ಮೃತಳಿಗೆ ಒಂದು ಹೆಣ್ಣು ಮತ್ತು ಒಂದು ಗಂಡು ಮಕ್ಕಳು ಇವೆ. ನಂದಿನಿಯನ್ನ ಮದುವೆಯಾದ ಮಾಂತೇಶ್ 10 ವರ್ಷದಿಂದ ತವರಿಗೆ ಕಳುಹಿಸಿಲ್ಲ.  ಹೆರಿಗೆ ವೇಳೆಯಲ್ಲಿ ಮಾತ್ರ ಮನೆಗೆ ಬಂದು ಹೋಗಿದ್ದ ನಂದಿನ ಮತ್ತೆ ಯಾವತ್ತೂ ತವರಿಗೆ ಬಂದಿಲ್ಲವೆಂದು ಕುಂಟುಂಬ ಆರೋಪಿಸಿದೆ. ಪ್ರೀತಿಯಲ್ಲಿ ಆರಂಭವಾದ ವೈವಾಹಿಕ ಜೀವನ ದುರಂತದಲ್ಲಿ ಅಂತ್ಯಗೊಂಡಿದೆ.

ಇದನ್ನೂ ಓದಿ-https://suddilive.in/archives/3830

Related Articles

Leave a Reply

Your email address will not be published. Required fields are marked *

Back to top button