ಕ್ರೈಂ ನ್ಯೂಸ್

ಮಹಿಳೆಯ ಪರ್ಸ್ ಕಿತ್ತುಕೊಂಡು ಹೋದ ಬೈಕ್ ಸವಾರ

ಸುದ್ದಿಲೈವ್/ಶಿವಮೊಗ್ಗ

ಎಲ್ ಬಿಎಸ್ ನಗರದಲ್ಲಿ .ಮಹಿಳೆಯ ವ್ಯಾನಿಟಿ ಬ್ಯಾಗ್ ಕಿತ್ತಿಕೊಂಡು ಹೋಗಿರುವ ಘಟನೆ ನಡೆದಿದ್ದು, ಪ್ರಕರಣ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಗಾಂಧಿ ನಗರದಲ್ಲಿ ಪೂಜಾ ಸಾಮಾಗ್ರಿಗಳನ್ನ ಮಾರಾಟ ಮಾಡುವ ಅಂಗಡಿಯನ್ನ ನಡೆಸುತ್ತಿದ್ದ ಮಾಲೀಕರ ತಾಯಿ ಏ.5 ರಂದು ಅಂಗಡಿಯನ್ನ ನಡೆಸಿ ರಾತ್ರಿ ಪರಿಚಯಸ್ಥರ ಆಟೋದಲ್ಲಿ ಎಲ್ ಬಿಎಸ್ ನಗರಕ್ಕೆ ಬಂದಿರುತ್ತಾರೆ.

ಎಲ್ ಬಿಎಸ್ ನಗರದ ತಪೋಮಯದ ಬಳಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಅಡ್ಡಲಾಗಿ ಬಂದ ಬೈಕ್ ಸವಾರ ಮಹಿಳೆಯ ವ್ಯಾನಿಟು ಬ್ಯಾಗ್ ಕಸಿದುಕೊಂಡು‌ ಹೋಗಿದ್ದಾನೆ.

ಗಾಂಧಿನಗರದಲ್ಲಿ ಮಹಿಳೆಯ ಮಗ ಪೂಜಾ‌ಸಾಮಾಗ್ರಗಳನ್ನ ಮಾರುವ ಮಳಿಗೆ ಯನ್ನ‌ನಡೆಸಿ ಶುಭಮಂಗಳದ ಶನೀಶ್ವರ ದೇವರ ಪೂಜೆ ನಡೆಸುತ್ತಾರೆ. ಈ ಬಗ್ಗೆ ಮಹಿಳೆ ರೇಣುಕಾ ಎಂಬುವರು ವಿನೋಬ ನಗರ ಠಾಣೆಯಲ್ಲಿ ಪರ್ಸ್ ನಲ್ಲಿ ಬ್ಯಾಂಕ್ ಎಟಿಎಂ ಕಾರ್ಡ್, 10 ಸಾವಿರ ರೂ. ನಗದು ಹಾಗೂ ಮೊಬೈಲ್ ಕಳುವಾಗಿರುವ ಬಗ್ಗೆ ದೂರು ನೀಡಿದ್ದಾರೆ.

ಇದನ್ನೂ ಓದಿ-https://suddilive.in/archives/12316

Related Articles

Leave a Reply

Your email address will not be published. Required fields are marked *

Back to top button