ಕ್ರೈಂ ನ್ಯೂಸ್

ರೈಲ್ವೆ ಮಾರ್ಗ ನಿರ್ಮಾಣ ವಿಚಾರದಲ್ಲಿ ಗಲಾಟೆ-ದೂರು ದಾಖಲು

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ-ರಾಣೇಬೆನ್ನೂರು ರೈಲ್ವೆ ಮಾರ್ಗ ನಿರ್ಮಾಣದ ವಿಚಾರದಲ್ಲಿ ಎಮ್ ಎಮ್ ಆರ್ ಇಂಜಿನಿಯರ್ ವರ್ಕ್ ನ ಮ್ಯಾನೇಜರ್ ಹಾಗೂ ನೌಕರರ ಮೇಲೆ ಹಲ್ಲೆಯಾಗಿರುವ ಘಟನೆ ವರದಿಯಾಗಿದೆ.

5 ತಿಂಗಳಿನಿಂದ ಕೆಲಸ ಮಾಡುತಿದ್ದ ಕಂಪನಿಯ ನೌಕರರ ಮತ್ತು ಮ್ಯಾನೇಜರ್ ಅವರು ಶಿವಮೊಗ್ಗ ಮತ್ತು ರಾಣೆಬೆನ್ನೂರು ರೈಲ್ವೆ ಮಾರ್ಗ ನಿಮರ್ಮಾಣ ಮಾಡುತ್ತಿದ್ದ ವಿಚಾರದಲ್ಲಿ ನಾರಾಯಣಪುರ ಗ್ರಾಮದ ರೈತರು ಮತ್ತು ಅವರ ಇಬ್ಬರು ಮಕ್ಕಳು ಕೆಲಸ ಮಡುವ ಸಮಯದಲ್ಲಿ ಅಡ್ಡಗಟ್ಟಿ ಅಂಡರ್ ಪೈಪ್ ಹಾಕುವ ವಿಚಾರದಲ್ಲಿ ಅಳವಡಿಸಿಲ್ಲವೆಂದು ಅವ್ಯಾಚ್ಯ ಶಬ್ದಗಳಿಂದ ಬೈದಿದ್ದಾರೆ.‌

ಮ್ಯಾನೇಜರ್ ಗೆ ಚಪ್ಪಲಿಯಿಂದ ಹೊಡೆದು ಹಾಗೂ ನೌಕರನ ಬಟ್ಟೆಯನ್ನು ಹರಿದು ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿರುವುದಾಗಿ ಆರೋಪಿಸಿ ಕುಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ-https://suddilive.in/archives/13609

Related Articles

Leave a Reply

Your email address will not be published. Required fields are marked *

Back to top button