ಕ್ರೈಂ ನ್ಯೂಸ್
ಎನ್ ಟಿ ರಸ್ತೆಯಲ್ಲಿ ರಸ್ತೆ ಅಪಘಾತ ಯುವಕ ಸಾವು
ಸುದ್ದಿಲೈವ್/ಶಿವಮೊಗ್ಗ
ಇಂದು ಬೆಳಿಗ್ಗಿನ ಜಾವ ನಡೆದ ರಸ್ತೆ ಅಪಘಾತದಲ್ಲಿ ಅಂಬರ್ ವೇಲಿ ಕಾಲೇಜಿನ ಪ್ರಾಂಶುಪಾಲರ ಮಗ ಮೃತಪಟ್ಟಿದ್ದಾನೆ.
ಜಾಗರಣೆಯ ಹಿನ್ನಲೆಯಲ್ಲಿ ಸ್ನೇಹಿತನನ್ನ ಎಂಕೆಕೆ ರಸ್ತೆಯಲ್ಲಿರುವ ಮನೆಗೆ ಡ್ರಾಪ್ ಮಾಡಲು ಹೋಗುವಾಗ ಎನ್ ಟಿ ರಸ್ತೆಯಿಂದ ಕೆಆರ್ ಪುರಂನ ಅಗ್ರಿಕಲ್ಚರಲ್ ಕಚೇರಿ ರಸ್ತೆಯ ತಿರುವಿಗೆ ತಿರುಗಿಸಲು ಯತ್ನಿಸುವಾಗ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ ಹೊಡೆದಿದೆ.
ಡಿಕ್ಕಿಯಲ್ಲಿ ಅಫದ್ ಎಂಬ ಯುವಕ ಸಾವನ್ನಪ್ಪಿದ್ದಾನೆ. 26 ವರ್ಷದ ಯುವಕ ಆರ್ ಎಂ ಎಲ್ ನಗರದಿಂದ ಎನ್ ಟಿ ರಸ್ತೆಗೆ ಬಂದು ಕೃಷಿ ಇಲಾಖೆ ಕಚೇರಿಯ ರಸ್ತೆಗೆ ತಿರುಗುವಾಗ ಅಪಘಾತ ಸಂಭವಿಸಿದೆ.
ಅಪಘಾತ ಕುರಿತು ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಪಘಾತವು ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಇದನ್ನೂ ಓದಿ-https://suddilive.in/archives/12257