ಕ್ರೈಂ ನ್ಯೂಸ್

ಬೈಕ್ ನಿಂದ ಬಿದ್ದು ವ್ಯಕ್ತಿ ಸಾವು

ಸುದ್ದಿಲೈವ್/ಶಿವಮೊಗ್ಗ

ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸುತ್ತಿದ್ದ 32 ವರ್ಷದ ವ್ಯಕ್ತಿ ಬೈಸಿಕಲ್ ನಿಂದ ಬಿದ್ದು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

ದಾಸರಕಲ್ಲಹಳ್ಳಿಯ ನಿವಾಸಿ ನೀಲೇಶ್ ಕೆಎ 14-ಇಪಿ-8708 ಕ್ರಮಸಂಖ್ಯೆಯ ಬೈಕ್ ಚಲಾಯಿಸಿಕೊಂಡು ಹೊಳೆಹೊನ್ನೂರಿಗೆ ಕೂಲಿಕೆಲಸಕ್ಕೆಂದು ಹೋಗುವಾಗ ಬೈಕ್ ಸಮೇತ ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ ಬೈಕ್ ನಿಂದ ಬಿದ್ದಿದ್ದಾರೆ.

ಹಿಂದೆಯೇ ಬೈಕ್ ನಲ್ಲಿ ಬರುತ್ತಿದ್ದ ಗ್ರಾಮದ ವಾಸಿಗಳಾದ ವಿರೇಶ ಮತ್ತು ದೇವರಾಜಪ್ಪ ರವರು ಕೂಡಲೇ ನೀಲೇಶ್ ನ್ನ ಎತ್ತಿ ಉಪಚರಿಸಿ ಹೊಳೆಹೊನ್ನೂರು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ.

ನಂತರ ಹೊಳೆಹೊನ್ನೂರು ಆಸ್ಪತ್ರೆಯಿಂದ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನೀಲೇಶ್ ಪರಿಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಪ್ರಕರಣ ಹೊಳೆಹೊನ್ನೂರು ಪೊಲೀಸ್ ಠಾಣೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ- https://suddilive.in/archives/13603

Related Articles

Leave a Reply

Your email address will not be published. Required fields are marked *

Back to top button