ಕಾಂತೇಶ್ ಗೆ ಟಿಕೇಟ್ ಕೈತಪ್ಪಿದರೆ ಸ್ವತಂತ್ರ್ಯ ಅಭ್ಯರ್ಥಿಯಾಗಿ ನಿಲ್ಲಿಸುವುದಾಗಿ ಬೆಂಬಲಿಗರ ಬೇಡಿಕೆ
ಸುದ್ದಿಲೈವ್/ಶಿವಮೊಗ್ಗ
ನಗರದ ಬಿಹೆಚ್ ರಸ್ತೆಯಲ್ಲಿರುವ ಗಾಯಿತ್ರಿ ಮಾಂಗಲ್ಯ ಮಂದಿರದಲ್ಲಿ ವಿಪ್ರ ಸ್ನೇಹ ಬಳಗದ ಸಮ್ಮೇಳನದಲ್ಲಿ ಕಾಂತೇಶ್ ಅಭಿಮಾನಿಗಳ ಬಳಗ ಲಗ್ಗೆ ಇಟ್ಟಿದೆ. ಕಾಂತೇಶ್ ಗೆ ಟಿಕೇಟ್ ತಪ್ಪಿದರೆ ಮುಂದಿನ ಹೆಚ್ಚೆಯ ಬಗ್ಗೆ ಸಚಿವ ಪ್ರಹ್ಲಾದ್ ಜೋಶಿಗೆ ವಿವರಿಸಿದ್ದಾರೆ.
ಹಾವೇರಿ ಗದಗ ಲೋಕಸಭಾ ಚುನಾವಣೆಯಲ್ಲಿ ಕಾಂತೇಶ್ ಗೆ ಬಿಜೆಪಿ ಟಿಕೇಟ್ ಕೊಡಬೇಕೆಂದು ಬಿಎಸ್ ವೈ ಮನೆಗೆ ಹೋಗಿ ಮನವಿ ಮಾಡಿಕೊಂಡು ಬಂದ ಅಭಿಮಾನಿಗಳು ವಿಪ್ರ ಸಮ್ಮೇಳನದಕ್ಕೂ ಬಂದು ಸಚಿವರನ್ನ ಭೇಟಿ ಮಾಡಿದ್ದಾರೆ. ಭಾಗಿಯಾದ ಸಚಿವ ಪ್ರಹ್ಲಾದ್ ಜೋಶಿ ಅವರು ಕಾರ್ಯಕ್ರಮದಿಂದ ಹೊರಬರುತ್ತಿದ್ದಂತೆ ಅಭಿಮಾನಿಗಳು ಭೇಟಿ ನೀಡಿ ಬೇಡಿಕೆ ಇಟ್ಟಿದ್ದಾರೆ.
ಹಾವೇರಿಯಲ್ಲಿ ಕಾಂತೇಶ್ ಗೆ ಟಿಕೇಟ್ ನೀಡಬೇಕು. ನೀಡದಿದ್ದರೆ ಶಿವಮೊಗ್ಗ ಜಿಲ್ಲೆಯಲ್ಲಿ ಕೆ.ಎಸ್.ಈಶ್ವರಪ್ಪ ಮತ್ತು ಪುತ್ರ ಕಾಂತೇಶ್ ಅವರನ್ನ ಸ್ವಾತಂತ್ರ್ಯ ಅಭ್ಯರ್ಥಿಯಾಗಿ ನಿಲ್ಲಿಸಿ ಗೆಲ್ಲಿಸಿಕೊಂಡು ಬರುವುದಾಗಿ ಅಭಿಮಾನಿಗಳು ಬೇಡಿಕೆ ಇಟ್ಟಿದ್ದಾರೆ. ಇದಕ್ಕೆ ಮಾಜಿ ಡಿಸಿಎಂ ಈಶ್ವರಪ್ಪ ಮತ್ತು ಪುತ್ರ ಕಾಂತೇಶ್ ಹೇಗೆ ಸ್ಪಂಧಿಸುತ್ತಾರೆ ಕಾದು ನೋಡಬೇಕಿದೆ.
ಬೇಕೆ ಬೇಕು ಟಿಕೇಟ್ ಬೇಕು ಎಂದು ಘೋಷಣೆ ಕೂಗಿದ್ದಾರೆ. ಪಕ್ಷ ಹಾಳಾಗುತ್ತಿರುವ ಬಗ್ಗೆ ಎಚ್ಚರಿಕೆ ಸಹ ಕಾಂತೇಶ್ ಬೆಂಬಲಿಗರು ನೀಡಿದ್ದಾರೆ.
ಇದನ್ನೂ ಓದಿ-https://suddilive.in/archives/10405