ಶಾಂತಾ ಸುರೇಂದ್ರ ಬಿಜೆಪಿ ಸೇರ್ಪಡೆ
ಸುದ್ದಿಲೈವ್/ಶಿವಮೊಗ್ಗ
ಜೆಡಿಎಸ್ ನಲ್ಲಿದ್ದ ಶಾಂತಾ ಸುರೇಂದ್ರ ಬಿಜೆಪಿಗೆ ಇಂದು ಅಧಿಕೃತವಾಗಿ ಸೇರ್ಪಡೆಯಾದರು.
ಪಾಕಿಸ್ತಾನ್ ಜಿಂದಾಬಾದ್ ಎನ್ನುವ ಪಕ್ಷ ನನಗೆ ಬೇಡ, ಸಜ್ಜನಿಕೆ, ಳ್ಳತನದಲ್ಲಿ ಕರೆದುಕೊಂಡು ಹೋಗುವ ಪಕ್ಷ ಬಿಜೆಪಿಯವರು ಎಂದು ಮಕುಟುಂಬ ಸಲಹೆ ನೀಡಿದ ಮೇಲೆ ಬಿಜೆಪಿಗೆ ಸೇರ್ಡೆಯಾಗಿದ್ದೇನೆ. ಶಿಕಾರಿಪುರದಲ್ಲಿ ಸೇರ್ಪಡೆಯಾಗಿದ್ದೆ. ಇಂದು ಪಕ್ಷದ ಕಚೇರಿಯಲ್ಲಿ ಸೇರ್ಪಡೆಯಾದೆನು ಎಂದರು.
ಶ್ರೇಷ್ಠ ಸಫತ್ತು ಉಳಿಸಲು ಮೋದಿಯವರು ಒಳ್ಳೆ ಕೆಲಸ ಮಾಡಿದ್ದಾರೆ. ಜಿಲ್ಲೆಯಲ್ಲಿ ಕ್ರಿಯಾಶೀಲಾ ರಾಜಕಾರಣಿ ಹಾಗೂ ಸಂಸದ ರಾಘವೇಂದ್ರರನ್ನ ಗೆಲ್ಲಿಸೋಣ ಎಂದು ತಿಳಿಸಿದರು.18 ವರ್ಷದಿಂದ ಯಾವುದೇ ಅಪೇಕ್ಷೆ ಇಲ್ಲದೆ ಜೆಡಿಎಸ್ ನಲ್ಲಿ ಕೆಲಸ ಮಾಡಿದೆ. ನಾಯಕ ಬೇಕಿತ್ತು. ಹಾಗಾಗಿ ಬಿಜೆಪಿಗೆ ಬಂದೆ ಎಂದರು.
ಕೈ ಸಿಗುವ ನಾಯಕರು ಬೇಕೆಂದು ಪಕ್ಷಕ್ಕೆ ಬಙದಿರುವೆ. ಮೋದಿಯವರ ಸಜ್ಜನಿಕೆ ನಮ್ಮ ಈಶ್ವರಪ್ಪ, ಯಡಿಯೂರಪ್ಪ, ಚೆನ್ನಬಸಪ್ಪನವರಲ್ಲಿದೆ ಎಂದು ಶ್ಲಾಘಿಸಿದರು.
ಶಾಸಕ ಚೆನ್ನಬಸಪ್ಪ ಮಾತನಾಡಿ, ಒಳ್ಳೆ ಕೆಲಸಕ್ಕೆ ಬಿಜೆಪಿ ನಿಮ್ಮ ಜೊತೆಗಿದೆ. ಜ.22 ರಂದು ರಾಮಮಂದಿರ ಉದ್ಘಾಟನೆಯಿಙದ ಭಾರತದ ಗೌರವ ಉನ್ನತಮಟ್ಟಕ್ಕೆ ಏರಿದೆ. ಕಾಶಿ ವಿಶ್ವನಾಥನ ಕಾರಿಡಾರ್ ಅದ್ಭುತವಾಗಿ ನಿರ್ಮಿಸಿದರು.
ಮೋದಿ ಕೇವಲ ಚರಂಡಿ, ರಸ್ತೆ ಮಾಡಲಿಲ್ಲ. ದೇಶದ ಸಸಕೃತಿಕ ಕೆಲಸವ್ನ ಎತ್ತಿಹಿಡಿದರು. ಹಾಗಾಗಿ ಮೋದಿ ಅವರು ಮಾ18 ಕ್ಕೆ ಬರುತ್ತಿದ್ದಾರೆ. ಕಾರ್ಯಕ್ರಮವನ್ನ ಯಶಸ್ವಿಗೊಳಿಸೋಣ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಗಾಯಿತ್ರಿದೇವಿ ಮಲ್ಲಪ್ಪ ಮಾಜಿ ಎಂಎಲ್ ಸಿ ಆರ್ ಕೆ ಸಿದ್ದರಾಮಣ್ಣ ಮೊದಲಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ-https://suddilive.in/archives/10754