ಸ್ಥಳೀಯ ಸುದ್ದಿಗಳು
ಆಹಾರ ದಸರಾ-ಎರಡು ನಿಮಿಷದಲ್ಲಿ 8 ಬಾಳೆಹಣ್ಣು ತಿಂದ ಆರೋಗ್ಯ ಸಿಬ್ಬಂದಿ, 7 ಕಡಬು ಗುಳುಂ!
ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದಲ್ಲಿ ದಸರಾ ಮಹೋತ್ಸವ ಆಚರಣೆಗೆ ನಿನ್ನೆ ಚಾಲನೆ ದೊರೆತಿದೆ. ಒಂದೊಂದೇ ದಸರಾ ಸಮಿತಿಗಳು ತಮ್ಮ ದಸರಾ ಆಚರಣೆಗೆ ಮೆರಗು ಹೆಚ್ಚಿಸಿವೆ. ಆಹಾರ, ಮಹಿಳಾ ಮತ್ತು ಮಕ್ಕಳ ದಸರಾ, ಚಿತ್ರ ದಸರಾ ಹೀಗೆ ವಿವಿಧ ದಸರಾಗಳನ್ನ ಆಚರಿಸಲಾಗುತ್ತಿದೆ.
ಮಹಾನಗರ ಪಾಲಿಕೆ ವತಿಯಿಂದ ದಸರಾ ಆಚರಣೆಯ ಹಿನ್ನಲೆಯಲ್ಲಿ ಆಹಾರ ದಸರಾವನ್ನ ಶಿವಪ್ಪ ನಾಯಕ ವೃತ್ತದ ಬಳಿ ಆಯೋಜಿಸಲಾಗಿತ್ತು. ಆಹಾರ ಇಲಾಖೆ ಸಿಬ್ಬಂದಿಗಳಿಗೆ ಬಾಳೆಹಣ್ಣು ತಿನ್ನುವ ಸ್ಪರ್ಧೆ, ನಾಗರೀಕರಿಗೆ ಕೊಟ್ಟೆ ಕಡುಬು, ಅವರೆಕಾಳು ಸಾರು ತಿನ್ನುವ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.
ಬಾಳೆಹಣ್ಣು ತಿನ್ನಲು ಎರಡು ನಿಮಿಷ ನಿಗದಿಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಎರಡು ನಿಮಿಷದಲ್ಲಿ ಆರೋಗ್ಯ ಸಿಬ್ವಂದಿ ಗೀತಾ ಎಂಬುವರು ಎಂಟು ಬಾಳೆಹಣ್ಣು ತಿಂದಿದ್ದಾರೆ. ಕಡುಬು ತಿನ್ನಲು ಎರಡು ನಿಮಿಷ ಸಮಯ ನಿಗದಿಯಾಗಿತ್ತು. ಎರಡು ನಿಮಿಷದಲ್ಲಿ ಸ್ಪರ್ಧಿಯೊಬ್ಬರು 7 ಕಡುಬು ತಿಂದಿದ್ದಾರೆ.
ಇದನ್ನೂ ಓದಿ-https://suddilive.in/archives/1363