ಗ್ರಾಹಕರ ಸೋಗಿನಲ್ಲಿ ಬಂದಿದ್ದ ಮಹಿಳೆಯರು ಪೊಲೀಸರ ವಶಕ್ಕೆ
ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದ ಗಾಂಧಿಬಜಾರ್ ನಲ್ಲಿರುವ ಜ್ಯೂವೆಲ್ಲರಿ ಶಾಪ್ ಗೆ ಭೇಟಿ ನೀಡಿದ್ದ ಮಹಿಳೆಯ ವಿರುದ್ಧ ಸೆಕ್ಷನ್ 108 ಪ್ರಕರಣ ದಾಖಲಾಗಿದೆ. ಸಾಂತ್ವಾನ ಕೇಂದ್ರಕ್ಕೆ ಕಳುಹಿಸಿರುವ ಇವರನ್ನ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
ಬಜಾರ್ ನಲ್ಲಿರುವ ಆರ್ ಆರ್ ಟೆಕ್ಸಟೈಲ್ಸ್ ಎದುರಿನ ಜ್ಯೂವೆಲ್ಲರಿ ಶಾಪ್ ವೊಂದರಲ್ಲಿ ನಿನ್ನೆ ಸಂಜೆ ಚಿನ್ನಾಭರಣ ಖರೀದಿಸಲು ಬಂದಿದ್ದ ಮಹಿಳೆಯರಿಬ್ಬರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರ ವಿರುದ್ಧ ಆಧ್ರ, ತಮಿಳುನಾಡು ಮತ್ತು ಬೆಂಗಳೂರಿನಲ್ಲಿ ಕಳ್ಳತನದ ಪ್ರಕರಣ ದಾಖಲಾಗಿದ್ದು, ಶಿವಮೊಗ್ಗದಲ್ಲೂ ಮುಂಜಾಗೃತ ಕ್ರಮವಾಗಿ ಅವರ ಮೇಲೆ ದೂರು ದಾಖಲಾಗಿದೆ.
ಇಬ್ಬರು ಮಹಿಳೆಯರೂ ಸಹ ತಮಿಳುನಾಡಿನವರಾಗಿದ್ದಾರೆ. ಒಬ್ಬರನ್ನ ಕೃಷ್ಣವೇಣಿ ಎಂದು ಗುರುತಿಸಿದರೆ ಮತ್ತೊಬ್ಬರು ರತ್ನ ಎಂದು ಗುರುತಿಸಲಾಗಿದೆ. ಇವರಿಗೆ ಕನ್ನಡ ಭಾಷೆ ಬರೊಲ್ಲ. ಆದರೆ ಕಳುವು ಪ್ರಕರಣಗಳು ಇವರ ಮೇಲೆ ಇರುವುದರಿಂದ ಮುಂಜಾಗೃತ ಕ್ರಮವಾಗಿ ದೂರು ದಾಖಲಾಗಿದೆ.
ಇವರುಗಳು ಜ್ಯೂವೆಲರಿ ಅಂಗಡಿಗೆ ಬಂದು ಗ್ರಾಹಕರಂತೆ ನಟಿಸಿ, ತಮ್ಮ ಬಳಿಯಿರುವ ಅಲ್ಪ ಪ್ರಮಾಣದ ಚಿನ್ನಗಳನ್ನ ಮಾರಾಟದ ಜಾಗದಲ್ಲಿರಿಸಿ ದೊಡ್ಡ ಪ್ರಮಾಣದ ಚಿನ್ನಾಭರಣಗಳನ್ನ ಕದಿಯುವ ಆರೋಪ ಇವರ ಮೇಲೆ ಇದೆ. ಅಂಗಡಿ ಮಾಲೀಕರು ದೂರು ನೀಡಲು ಮುಂದಾಗದ ಕಾರಣ ಪೊಲೀಸರೇ ಮುನ್ನಚ್ಚರಿಕೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ-https://suddilive.in/archives/10706