ಕ್ರೈಂ ನ್ಯೂಸ್
ಕಾಗೇಹಳ್ಳದ ಬ್ರಿಡ್ಜ್ ಕೆಳಗೆ ಗೋತ್ಯಾಜ್ಯ ವಸ್ತುಗಳು ಪತ್ತೆ
ಸುದ್ದಿಲೈವ್/ಭದ್ರಾವತಿ
ಭದ್ರಾವತಿಯಲ್ಲಿ ಕಾಗೆಕೋಡಮಗ್ಗಿ ಮತ್ತು ಬಾಬಳ್ಳಿ ರಸ್ತೆಯ ಬ್ರಿಡ್ಜ್ ಹಳ್ಖದ ನೀರಿನಲ್ಲಿ ಗೋಮೂಳೆ ಮತ್ತು ಖಲಿಜಗಳು ಪತ್ತೆಯಾಗಿವೆ. ಇದರಿಂದ ಗೋಹತ್ಯೆ ಪ್ರಕರಣಗಳು ಮುಂದುವರೆದಿದೆ.
ಕಾಗೆಕೋಡಮಗ್ಗಿ ಮತ್ತು ಬಾಬಳ್ಳಿ ರಸ್ತೆಯಲ್ಲಿ ಗೋಮೂಳೆ ಮತ್ತು ಗೋಖಲಿಜಗಳು ಪತ್ತೆಯಾಗಿದೆ. ಇದರಿಂದ ಗೋಹತ್ಯೆಗಳ ನಿರಂತರ ಮಾರಣಹೋಮ ಮುಂದುವರೆದಿದೆ.
ಕಾಗೆಹಳ್ಳದ ಬ್ರಿಡ್ಜ್ ಬಳಿ ಗೋತ್ಯಾಜ್ಯಗಳನ್ನ ನೀರಿಗೆ ಹಾಕಿ ಪರಿಸರ ಮಾಲಿನ್ಯಮಾಡಿರುವ ಬಗ್ಗೆ ಹಿಂದೂ ಸಂಘಟನೆಗಳು ಆರೋಪಿಸುತ್ತಿವೆ. ಕಾಗೆಹಳ್ಳಕ್ಕೆ ಭದ್ರನದಿಯ ನೀರು ಬಿದ್ದು ಸಂಗ್ರಹವಾಗುತ್ತಿದ್ದು ಇದನ್ನ ಕೃಷಿ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ.
ಜನವರಿ ತಿಂಗಳಲ್ಲೇ ಭದ್ರಾವತಿ ಗ್ರಾಮಾಂತರ ಪೋಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದರೂ ಸರಿಪಡಿಸುವುದಾಗಿ ಭರವಸೆ ನೀಡಿದ್ದರೂ ಈ ಬಗ್ಗೆ ಕ್ರಮ ಜರುಗಿಸದ ಹಿನ್ನಲೆಯಲ್ಲಿ ಈ ಪ್ರಕರಣ ಮರುಕಳುಸುತ್ತಿವೆ ಎಂದು ದೂರುಕೊಟ್ಟ ಹಿಂದೂ ಜಾಗರಣೆ ಕಾರ್ಯಕರ್ತ ಆರೋಪಿಸಿದ್ದಾರೆ.
ಇದನ್ನೂ ಓದಿ-https://suddilive.in/archives/12727