ಕ್ರೈಂ ನ್ಯೂಸ್

ಬೈಂದೂರಿನ ಸಮಾವೇಶದಲ್ಲಿ ಚಿಕನ್ ಬಿರಿಯಾನಿ-ಫ್ಲೈಯಿಂಗ್ ಸ್ಕ್ವಾಡ್ ಎಂಟ್ರಿ

ಸುದ್ದಿಲೈವ್/ಶಿವಮೊಗ್ಗ

ಈಶ್ವರಪ್ಪ ಸಮಾವೇಶದ ಕಿಚನ್ ಗೆ ಫ್ಲೈಯಿಂಗ್ ಸ್ಕ್ವಾಡ್ ನವರು ಪ್ರವೇಶಿಸಿ ತಪಾಸಣೆ ನಡೆಸಿದ್ದಾರೆ. ಬಿರಿಯಾನಿ ಸಪ್ಲೆ ಮಡುದ್ರೆ ಚುನಾವಣ ವೆಚ್ಚಕ್ಕೆ ಸೇರ್ಪಡೆಯಾಗುತ್ತೆ ಎಂದು ತಾಕೀತು ಮಾಡಿರುವ ಘಟನೆ ವರದಿಯಾಗಿದೆ.

ಈಶ್ವರಪ್ಪ ಸಮಾವೇಶಕ್ಕೆ ಬಂದ ಕಾರ್ಯಕರ್ತರಿಗೆ ಬಿರಿಯಾನಿ ತಯಾರಿಸಿದ್ದರು. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರು ವಿಧಾನಸಭಾ ಕ್ಷೇತ್ರದ ಉಪ್ಪಂದದಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿತ್ತು.

ಈಶ್ವರಪ್ಪ ಸಮಾವೇಶದಲ್ಲಿ ಒಂದು ಸಾವಿರ ಜನಕ್ಕೆ ಬಿರಿಯಾನಿ ಸಹ ತಯಾರಿಯಾಗಿತ್ತು.‌ ಮಧ್ಯಾಹ್ನ ಕಾರ್ಯಕರ್ತರಿಗೆ ಬಡಿಸಲು  ಚಿಕನ್ ಬಿರಿಯಾನಿ ತಯಾರಿಸಲಾಗಿತ್ತು.

ಸಮಾವೇಶ ನಡೆಯುತ್ತಿದ್ದ ಸಭಾಂಗಣಕ್ಕೆ ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ದಾಳಿ ನಡೆಸಿದ್ದಾರೆ. ಬಿರಿಯಾನಿ ಸಪ್ಲೈ ಮಾಡಿದರೆ ಚುನಾವಣೆ ವೆಚ್ಚಕ್ಕೆ ಸೇರ್ಪಡೆಗೊಳಿಸುವುದಾಗಿ ಅಧಿಕಾರಿಗಳ ಎಚ್ಚರಿಕೆ ನೀಡಿದ್ದಾರೆ.

ತಯಾರಿಸುತ್ತಿದ್ದ ಬಿರಿಯಾನಿ ಕಿಚನ್, ಸಭಾಂಗಣದಲ್ಲೇ ಉಳಿದಿದೆ. ಬಿರಿಯಾನಿಗಾಗಿ ಕಾದು ಕಾರ್ಯಕರ್ತರು ಸುಸ್ತಾಗಿದ್ದಾರೆ. ಬಿರಿಯಾನಿ ತಿನ್ನದೇ  ಈಶ್ವರಪ್ಪ ಪರ ಕಾರ್ಯಕರ್ತರು ಮನೆಗೆ ವಾಪಾಸಾಗಬೇಕಾಯಿತು.

ಶಿವಮೊಗ್ಗದಲ್ಲಿ ಎರಡು ಮೂರು ಸಮಾವೇಶ ನಡೆಸಿದರೂ ಯಾವ ಬಿರಿಯಾನಿಯನ್ನೂ ಮಾಡಿಸದ ಈಶ್ವರಪ್ಪ ಘಟ್ಟದ ಕೆಳಗಿನ ಕಾರ್ಯಕ್ರಮದಲ್ಲಿ ಈ ರೀತಿ ಯಾಕೆ ನಡೆದುಕೊಂಡರು ಎಂಬುದು ಅಚ್ಚರಿ ಮೂಡಿಸಿದೆ.

ಇದನ್ನೂ ಓದಿ-https://suddilive.in/archives/11845

Related Articles

Leave a Reply

Your email address will not be published. Required fields are marked *

Back to top button