ಕೇಕ್ ಕಟ್ ಮಾಡುವ ವಿಷಯದಲ್ಲಿ ಗಲಾಟೆ-ಓರ್ವ ಅರೆಸ್ಟ್
ಸುದ್ದಿಲೈವ್/ಹೊಳಹೊನ್ನೂರು
ಹುಟ್ಟು ಹಬ್ಬದ ಪಾರ್ಟಿಯಲ್ಲಿ ಕೆಕ್ ಕಟ್ ಮಾಡುವ ವಿಚಾರಕ್ಕೆ ಜಗಳವಾಗಿ ಯುವಕನೊಬ್ಬನಿಗೆ ಚಾಕು ಇರಿದ ಘಟನೆ ಜರುಗಿದೆ. ಸಮೀಪದ ಹೊಳೆಬೈರನಹಳ್ಳಿ ನಿವಾಸಿ ಸಂತೋಷ (೨೨) ಗಾಯಗೊಂಡಿದ್ದಾರೆ. ಚಾಕು ಇರಿದ ಸಮೀಪದ ಭದ್ರಾಪುರದ ನಿವಾಸಿ ಪೋಟೊಗ್ರಾಫರ್ ಅಭಿಷೇಕ್ನನ್ನು ಬಂದಿಸಲಾಗಿದೆ.
ಹುಲಿಮಟ್ಟಿ ಕ್ಯಾಂಪ್ ನಿವಾಸಿ ಸಂತೋಷ ಎಂಬಾತನ ಹುಟ್ಟು ಹಬ್ಬ ಆಚರಣೆ ವೇಳೆ ಘಟನೆ ಜರುಗಿದೆ. ಸ್ನೇಹಿತನ ಹುಟ್ಟು ಹಬ್ಬದ ಪ್ರಯುಕ್ತ ೬ ಜನ ಸ್ನೇಹಿತರು ಶಿವಮೊಗ್ಗ – ಚಿತ್ರದುರ್ಗ ರಾಷ್ಟಿçÃಯಾ ಹೆದ್ದಾರಿಯ ಹೋಟೆಲ್ನಲ್ಲಿ ಊಟ ಮುಗಿಸಿಕೊಂಡು ಮನೆಗೆ ವಾಪ್ಪಸಾಗುವಾಗ ಜೊತೆಯಾದ ಕೆಲ ಸ್ನೇಹಿತರು ಕೆಕ್ ಕಟ್ ಮಾಡಿ ಹುಟ್ಟು ಹಬ್ಬ ಆಚರಣೆ ಮಾಡುವಂತೆ ಹೇಳಿ ವ್ಯವಸ್ಥೆ ಮಾಡಿಕೊಂಡಿದು ಅಲ್ಲೆ ರಸ್ತೆ ಪಕ್ಕ ಇದ್ದ ರಸ ಗೊಬ್ಬರದ ಮಾರಾಟದ ಅಂಗಡಿ ಮುಂಭಾಗ ಕೆಕ್ ಕಟ್ ಮಾಡಿದ್ದಾರೆ.
ಕೆಕ್ ಕಟ್ ಮಾಡಿ ತಿಂದ ನಂತರ ಕೆಕೆ ಕಟ್ ಮಾಡುವಾಗ ಆತುರ ಮಾಡುತ್ತೀಯಾ ಎಂದು ಕ್ಯಾತೆ ತೆಗೆದ ಹೊಳೆಬೆನವಳ್ಳಿ ಅಭಿಷೇಕ್ನ ಸ್ನೇಹಿತರಿಬ್ಬರು ಹೊಳೆಬೈರನಹಳ್ಳಿಯ ಸಂತೋಷನೊAದಿಗೆ ಮಾತಿಗೆ ಮಾತು ಬೆಳೆಸಿದ್ದಾರೆ. ಜಗಳ ತಾರಕಕ್ಕೆರಿ ಹೊಳೆಬೈರನಹಳ್ಳಿಯ ಸಂತೋಷನ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾರೆ. ಸ್ಥಳದಲ್ಲಿದ ಸ್ನೇಹಿತರು ಜಗಳ ಬಿಡಿಸಿ ರಕ್ತದ ಮಡುವಿನಲ್ಲಿ ಬಿದ್ದಿದ ಸಂತೋಷನನ್ನು ಹೊಳೆಹೊನ್ನೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಗಾಯಾಳು ಸಂತೋಷನ ತಂದೆ ಲೊಕೇಶಯ್ಯ ಆರೋಪಿಗಳ ವಿರುದ್ದ ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಬಂದಿತ ಅಭಿಷೇಕ್ ಹಿಂದೆ ಭದ್ರಾಪುರದಲ್ಲಿ ನಡೆದಿದ ಜೋಡಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಶಿಕ್ಷೆ ಅನುಭವಿಸಿ ಬಂದು ಹೊಳೆಬೆನವಳ್ಳಿಯಲ್ಲಿ ಪೋಟೊಗ್ರಾಪರ್ ವೃತ್ತಿ ಆರಂಭಿಸಿದ. ಪ್ರಕರಣಕ್ಕೆ ಸಂಬಂದಿಸಿದಂತೆ ಇನ್ನಿಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ-https://suddilive.in/archives/6839