ಡೆತ್ ನೋಟ್ ಬರೆದು ಮಹಿಳೆ ವಿಷ ಸೇವಿಸಿ ಆತ್ಮಹತ್ಯೆ
ಸುದ್ದಿಲೈವ್/ಸಾಗರ
ಒಂದು ವರ್ಷದ ಹಿಂದೆ ಸಾಗರದ ನಿವಾಸಿ 33 ವರ್ಷದ ಮಹಿಳೆಯು ಸೊರಬ ರಿಜಿಸ್ಟ್ರಾರ್ ಕಚೇರಿಯಲ್ಲಿ ಸೊರಬ ಯುವಕನನ್ನ ಪ್ರೀತಿಸಿ ಮದುವೆಯಾಗಿದ್ದು, ಈ ಮದುವೆ ಇಷ್ಟವಿಲ್ಲದ ಕಾರಣ ಯುವಕನ ಸಹೋದರಿಯರು ಮತ್ತು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಕಿರುಳಕ್ಕೆ ಸಾವನ್ನಪ್ಪಿರುವುದಾಗಿ ಡೆತ್ ನೋಟ್ ಬರೆದು ಆತ್ಮ ಹತ್ಯೆ ಮಾಡಿಕೊಂಡಿದ್ದಾಳೆ.
ಮಹಿಳೆಯ ಸಾವು ಈ ಮೂವರ ಕುಮ್ಮಕ್ಕಿನಿಂದ ನಡೆದಿದೆ ಎಂದು ಮದುವೆಯಾದ ಯುವಕ ಜಯರಾಮ್ ನ ಸಹೋದರಿಯರಾದ ವೀಣ, ವಾಣಿ ಮತ್ತು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುವ ರವಿ ಯಾನೆ ಮಲೆಯೂರು ಬೀರಪ್ಪನವರ ವಿರುದ್ಧ ದೂರು ದಾಖಲಾಗಿದೆ.
ಕಳೆದ ಒಂದು ವರ್ಷದ ಹಿಂದೆ ಸೊರಬದ ಯುವಕ ಜಯರಾಮ್ ಎಂಬುವನನ್ನ 33 ವರ್ಷದ ಯುವತಿ ಶಾಲಿನಿ ಪ್ರೀತಿಸಿ ಸೊರಬ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ರಿಜಿಸ್ಟ್ರರ್ ಮದುವೆಯಾಗಿದ್ದರು. ಇಬ್ಬರು ಅಂತರ್ಜಾತಿ ವಿವಾಹವಾಗಿ ಅನೂನ್ಯವಾಗಿದ್ದರು.
ಆದರೆ ಈ ಮದುವೆ ಸಹೋದರಿಯರಾದ ವಾಣಿ ಮತ್ತು ವೀಣ ಮತ್ತು ಸಾಗರದ ಗ್ರಾಮಾಂತರ ಪೊಲೀಸ್ ಠಾಣೆಯ ರವಿ ಎಂಬುವರು ತನಗಿಂತ ಕಡಿಮೆ ವಯಸ್ಸಿನ ಯುವಕನನ್ನ ಮದುವೆಯಾಗಿದ್ದೀಯ ಎಂದು ಮೂವರು ಸಾಗರದ ಕೆಳದಿ ರಸ್ತೆಯಲ್ಲಿರುವ ಮನೆಗೆ ಹೋಗಿ ಗಲಾಟೆ ಮಾಡುತ್ತಿದ್ದುದ್ದಾಗಿ ಮೃತ ಶಾಲಿನಿ ಸಹೋದರಿ ದೂರು ದಾಖಲಿಸಿದ್ದಾರೆ.
ಇದನ್ನೇ ಮನಸ್ಸಿಗೆ ಹಚ್ಚಿಕೊಂಡ ಮಹಿಳೆ ಶಾಲಿನಿ ಸಾಗರದ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಆತ್ಮಹತ್ಯೆಗೆ ಯತ್ನಿಸಿದ್ದ ಶಾಲಿನಿಯನ್ನ ಬದುಕಿಸಿಕೊಳ್ಳಲು ಶಿವಮೊಗ್ಗ ಮೆಗ್ಗಾನ್ ನಂತರ ಮಣಿಪಾಲು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಜಯರಾಮ್, ಸಹೋದರಿಯರು ಮತ್ತು ರವಿ ನಾಲ್ಕು ಜನ ಸಣ್ಣ ವಯಸ್ಸಿನ ಯುವಕನನ್ನ ಮದುವೆಯಾಗಿದ್ದೀಯ, ಒಂದೋ ವರದಕ್ಷಿಣೆ ಕೊಡು ಅಥವಾ ಗಂಡನನ್ನ ಬಿಟ್ಟುಹೋಗು ಇಲ್ಲ ಎಲ್ಲಾದರೂ ಸಾಯಿ ಎಂದು ನಿಂದಿಸಿದ್ದಾರೆ.
ಇವರ ಕಿರುಕುಳಕ್ಕೆ ಮನನೊಂದು ಸಾವನ್ನಪ್ಪಿರುವುದಾಗಿ ಡೆತ್ ನೋಟ್ ಬರೆದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತ ಶಾಲಿನಿಯ ಸಹೋದರಿ ಎಫ್ಐಆರ್ ದಾಖಲಿಸಿದ್ದಾರೆ.
ಇದನ್ನೂ ಓದಿ-https://suddilive.in/archives/6124