ವರದಿಗಾರ ತಟ್ಟೆಹಳ್ಳಿಯ ರವಿಕುಮಾರ್ ನಿಧನ
ಸುದ್ದಿಲೈವ್/ಹೊಳೆಹೊನ್ನೂರು
ವರದಿಗಾರ ತಟ್ಟೆಹಳ್ಳಿಯ ರವಿಕುಮಾರ್ (45) ಹೃದಯಘಾತದಿಂದ ಮಂಗಳವಾರ ನಿದನರಾಗಿದ್ದಾರೆ. ಸೋದರ ಅತ್ತೆಯ ಶವ ಸಂಸ್ಕಾರಕ್ಕೆ ತೆರಳಿದ ವೇಳೆ ಹೃದಯಘಾತವಾಗಿ ಮೃತಪಟ್ಟಿದ್ದಾರೆ.
ರವಿ ಡೈಲಿ ನ್ಯೂಸ್ ಪತ್ರಿಕೆಗೆ ಅರೆಕಾಲಿಕ ವರದಿಗಾರನಾಗಿ ಕೆಲಸ ಮಾಡುತ್ತಿದ್ದರು. ಶಿವಮೊಗ್ಗ ಕಾರ್ಯನಿರತ ಪತ್ರಕರ್ತರ ಸಂಘದ ಹೊಳೆಹೊನ್ನೂರು ಘಟಕದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದರು. ಚನ್ನಗಿರಿ ತಾಲೂಕಿನ ಸುಣ್ಣಿಗೆರೆಯಲ್ಲಿ ಮೃತಪಟ್ಟಿದ ಅತ್ತೆ ಶವಸಂಸ್ಕಾರಕ್ಕೆ ತೆರಳಿದ ವೇಳೆ ಹೃದಯಘಾತವಾಗಿ ಸ್ಥಳದಲ್ಲೆ ಸಾವನಪ್ಪಿದ್ದಾರೆ. ಮಂಗಳವಾರ ಮುಂಜಾನೆ ಸುಣ್ಣಿಗೆರೆಗೆ ತೆರಳಿದ ವೇಳೆ ಸುಸ್ತಾಗುತ್ತಿದೆ ಎಂದು ಒಮ್ನಿಯಲ್ಲಿ ಮಲಗಿದ್ದಾರೆ.
ಮಲಗಿ ತುಂಬ ಹೊತ್ತಾಗಿದೆ ಎಂದು ಸಂಬAಧಿಗಳು ರವಿಯನ್ನು ಎಬ್ಬಿಸಿಲು ಹೋದಾಗ ಹೃದಯಘಾತವಾಗಿರುವುದು ತಿಳಿದಿದೆ. ಕೂಡಲೆ ರವಿಯನ್ನು ಚನ್ನಗಿರಿಯ ಆಸ್ಪತ್ರೆಗೆ ಕರೆದೊಯ್ಯವಷ್ಠರಲ್ಲೆ ಮೃತಪಟ್ಟಿದ್ದಾರೆ.
ತಟ್ಟೆಹಳ್ಳಿಯಲ್ಲಿ ಮಂಗಳವಾರ ದಿಂದ ಎರಡು ದಿನಗಳ ಕಾಲ ಮಾರಿಕಾಂಬ ಜಾತ್ರ ಮಹೋತ್ಸವ ನಡೆಯಲಿದ್ದು ಹಬ್ಬಕ್ಕೆಂದು ನೆಂಟರಿಷ್ಟರು ರವಿಕುಮಾರ್ ಮನೆಯಲ್ಲಿ ಜಮಾಯಿಸಿದ್ದಾರೆ ಆದರೆ ಜವರಾಯ ಹಬ್ಬದ ಖುಷಿಯನ್ನು ಕಸಿದಿದ್ದಾನೆ. ಮಂಗಳವಾರ ಗ್ರಾಮದಲ್ಲಿ ನಿರವ ಮೌನ ಆವರಿಸಿತ್ತು. ಹಬ್ಬದ ವಾತವರಣದಲ್ಲಿದ ಗ್ರಾಮದ ಜನರಲ್ಲಿ ದುಖಃ ಮಡುಗಟ್ಟಿತ್ತು. ಮೃತ ರವಿಗೆ ಪತ್ನಿ. ಒಂದು ಹೆಣ್ಣು ಮಗುವಿದೆ. ಮಂಗಳವಾರ ಸಂಜೆ ಮೃತರ ಸ್ವ ಜಮೀನಿನಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತ್ತು.
ಇದನ್ನೂ ಓದಿ-https://suddilive.in/archives/11047