ಈಶ್ವರಪ್ಪನವರಿಂದ ಧಾರ್ಮಿಕ ಕೇಂದ್ರಗಳಲ್ಲಿ ಪ್ರಚಾರ-ಮತ್ತೊಂದು ಪ್ರಕರಣ ದಾಖಲು
ಸುದ್ದಿಲೈವ್/ಶಿವಮೊಗ್ಗ
ಮೊನ್ನೆ ಶಿಕಾರಿಪುರದಲ್ಲಿ ಈಶ್ವರಪ್ಪನವರ ಬೈಕ್ ರ್ಯಾಲಿಯಲ್ಲಿ ನಿಗದಿ ಪಡಿಸಿರುವ ಬೈಕ್ ಗಳ ಸಂಖ್ಯೆಗಿಂತ ಹೆಚ್ಚಿನ ಬೈಕ್ ಬಳಕೆ ಮತ್ತು ಓಂ ಚಿಹ್ನೆ ಬಳಕೆಯ ವಿರುದ್ಧ ದೂರು ದಾಖಲಾದ ಬೆನ್ನಲ್ಲೇ ಮತ್ತೊಂದು ಪ್ರಕರಣ ದಾಖಲಾಗಿದೆ.
ಶಿಕಾರಿಪುರದಲ್ಲಿ ಈಶ್ವರಪ್ಪನವರ ಬೈಕ್ ರ್ಯಾಲಿಯಲ್ಲಿ ನಿಗದಿಯಾಗಿದ್ದಕ್ಕಿಂತ ಹೆಚ್ಚಿನ ಬೈಕ್ ಗಳನ್ನ ಬಳಸಲಾಗಿದೆ. ಮತ್ತು ಓಂ ಚಿಹ್ನೆ ಬಳಸಿಕೊಳ್ಳಲಾಗಿದೆ ಎಂದು ಎಂಸಿಸಿಯ ಫ್ಲೈಯಿಂಗ್ ಸ್ಕ್ವಾಡ್ ನವರು ದೂರು ಕೊಟ್ಟಿದ್ದರು.
ಅದರಂತೆ ಇಂದು ಗೋಪಾಳದ ರಂಗನಾಥ ಸ್ವಾಮಿ ದೇವಾಲಯದಲ್ಲಿ ಪ್ರಚಾರ ನಡೆಸಿರುವ ಈಶ್ವರಪ್ಪನವರು ರಾಜಕೀಯ ಪ್ರಚಾರಕ್ಕಾಗಿ ಧಾರ್ಮಿಕ ಕೇಂದ್ರಗಳನ್ನ ಬಳಸಿಕೊಂಡ ಆರೋಪದ ಅಡಿ ದೂರು ದಾಖಲಾಗಿದೆ.
ಈ ಹಿಂದೆಯೂ ಈಶ್ವರಪ್ಪ ಸ್ವಾಮೀಜಿ ಮತ್ತು ಮಠಗಳನ್ನ ಭೇಟಿ ಮಾಡಿದ್ದರೂ ದಾಖಲಾಗದ ಪ್ರಕರಣ ಈಗ ದೇವಸ್ಥಾನದಲ್ಲಿ ದೂರು ದಾಖಲಾಗಿದೆ. ಈ ದೂರು ದಾಖಲು ಫ್ಲೈಯಿಂಗ್ ಸ್ಕ್ವಾಡ್ ಗಳ ಕರ್ತವ್ಯವೆನಿಸಿಕೊಂಡರು ಕಾಣದ ಕೈಗಳ ಬಗ್ಗೆ ಶಂಕೆ ವ್ಯಕ್ತವಾಗುತ್ತಿದೆ.
ಈಶ್ವರಪ್ಪನವರು ಸ್ವಾಮೀಜಿ ಅವರನ್ನ ಭೇಟಿಯಾಗಿರುವ ಬಗ್ಗೆ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಸುದ್ದಿಗೋಷ್ಠಿಯಲ್ಲೇ ಆಕ್ಷೇಪಿಸಿದ್ದರು. ಆದರೆ ಈಗ ದೇವಸ್ಥಾನಗಳಿಗೆ ಈಶ್ವರಪ್ಪನವರು ಹೋಗಿ ಬರುತ್ತಿರುವುದು ಕಣ್ಣಿಗೆ ಬಿದ್ದಿದೆ.
ಇದನ್ನೂ ಓದಿ-https://suddilive.in/archives/11753