ಕ್ರೈಂ ನ್ಯೂಸ್

ಲಾರಿ ಹರಿದು ಮೂವರು ಬೈಕ್ ಸವಾರರು ಸ್ಥಳದಲ್ಲೇ ಸಾವು

ಸುದ್ದಿಲೈವ್/ಶಿವಮೊಗ್ಗ

ಎರಡು ಬೈಕ್ ಗಳ‌ ನಡುವೆ ಮುಖಾಮುಖಿ ಢಿಕ್ಕಿ ಉಂಟಾಗಿದ್ದು, ಮೂವರು ಯುವಕರು ಸಾವನ್ನಪ್ಪಿದ್ದಾರೆ.

ನಿನ್ನೆ ರಾತ್ರಿ  ಬೈಕ್ ಢಿಕ್ಕಿಯಾಗಿದ್ದು ಮೂವರು ಸವಾರರು ರಸ್ತೆ ಮೇಲೆ ಬಿದ್ದಿದ್ದಾರೆ. ರಸ್ತೆ ಮೇಲೆ ಬಿದ್ದಿದ್ದ ಬೈಕ್ ಸವಾರರ ಮೇಲೆ  ಲಾರಿ ಹರಿದಿದೆ. ಲಾರಿ ಹರಿದು ಮೂರು ಮಂದಿ ಬೈಕ್ ಸವಾರರು ಸ್ಥಳದಲ್ಲೇ ಸಾವಾಗಿದೆ. ಓರ್ವನಿಗೆ ಗಾಯಗಳಾಗಿವೆ.

ಅರಹತೊಳಲು ಬಳಿ ನಿನ್ನೆ ರಾತ್ರಿ ನಡೆದಿರುವ ಘಟನೆ ನಡೆದಿದೆ. ವಿಕಾಸ್ (18), ಯಶ್ವಂತ‌(17) ಶಶಾಂಕ (17) ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಗಾಯಾಳು ಬಸವರಾಜ್ ನನ್ನ  ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದಾರೆ.

ಮೃತರು ಹಳೆ ಜಂಬರಗಟ್ಟ ನಿವಾಸಿಗಳುಲಾಗಿದ್ದಾರೆ. ರಸ್ತೆ ಅಪಘಾತ ಕುರಿತು ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ-https://suddilive.in/2023/09/30/ಕರ್ನಾಟಕ-ನೈರುತ್ಯ-ಪದವೀಧರರ/

Related Articles

Leave a Reply

Your email address will not be published. Required fields are marked *

Back to top button