ರಾಜಕೀಯ ಸುದ್ದಿಗಳು

ಈಶ್ವರಪ್ಪರಿಗೆ ದೆಹಲಿಗೆ ಬರಲು ಹೇಳಿ,ಟಿಕೇಟ್ ನಾನು ಕೊಡಿಸುವೆ-ಬಿಎಸ್ ವೈ ಭರವಸೆ

ಸುದ್ದಿಲೈವ್/ಶಿವಮೊಗ್ಗ

ಹಾವೇರಿ ಟಿಕೇಟ್ ಗೆ ಶಿವಮೊಗ್ಗದ ಬಿಎಸ್ ವೈ‌ ಮನೆಯ ಮುಂದೆ ಕಾಂತೇಶ್ ಬೆಂಬಲಿಗರಿಂದ ಹೈಡ್ರಾಮಾ ಮುಂದುವರೆದಿದೆ. ಮೂರನೇ ದಿನವೂ ಹಾವೇರಿಯಿಂದ ಬಂದ ಕಾಂತೇಶ್ ಬೆಂಬಲಿಗರು ಬಿಎಸ್ ವೈರನ್ನ ಭೇಟಿ ಮಾಡುವ ಪ್ರಯತ್ನ ಇಂದು ಫಲಿಸಿದೆ.

ಕಳೆದ ಮೂರು ದಿನಗಳಿಂದ ಕಾಂತೇಶ್ ಗೆ ಟಿಕೇಟ್ ನೀಡುವಂತೆ ಒತ್ತಾಯಿಸಿ ಅವರ ಬೆಂಬಲಿಗರು ಬಿಎಸ್ ವೈ ಮನೆಗೆ ಬಂದರೂ ಬಿಎಸ್ ವೈ ಕೈಗೆ ಸಿಕ್ಕಿರಲಿಲ್ಲ. ಇಂದು ಬೆಳಿಗ್ಗೆ ಬಿಎಸ್ ವೈರನ್ನ ಬೆಂಬಲಿಗರು ಭೇಟಿ ಮಾಡಿದ್ದಾರೆ. ಈ ವೇಳೆ ಬಿಎಸ್ ವೈ ಮಾಧ್ಯಮಗಳಿಗೂ ಪ್ರತಿಕ್ರಿಯಿಸಿದ್ದಾರೆ.

ದಯವಿಟ್ಟು ಈಶ್ವರಪ್ಪರಿಗೆ ದೆಹಲಿಗೆ ಬರೋಕೆ ಹೇಳಿ ಎಂದ ಬಿಎಸ್ ವೈ, ಈಶ್ವರಪ್ಪ ದೆಹಲಿಗೆ ಬಂದ್ರೆ ಅಮಿತ್ ಶಾ ಜೊತೆ ರಿಕ್ವೆಸ್ಟ್ ಮಾಡಿಕೊಳ್ಳಲು ಅನುಕೂಲ ಆಗುತ್ತದೆ. ಈಶ್ವರಪ್ಪ ಜೊತೆಗೆ ನಾನು ಇರ್ತಿನಿ. ನಿನ್ನೆ ಪ್ರಹ್ಲಾದ್ ಜೋಷಿ ಅವರನ್ನು ಈಶ್ವರಪ್ಪ ಮನೆಗೆ ಕಳಿಸಿದ್ದೇನೆ ಎಂದು ಬೆಂಬಲಿಗರಿಗೆ ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ಈಶ್ವರಪ್ಪ ಬೇರೆ ಅಲ್ಲ, ನಾನು ಬೇರೆ ಅಲ್ಲ, ಯಾಕೆ ಚಿಂತೆ ಮಾಡ್ತೀರಾ, ನಾನು ಕಾಂತೇಶ್ ಗೆ ಟಿಕೆಟ್ ಕೊಡಿಸಲು ಎಲ್ಲಾ ಪ್ರಯತ್ನ ಮಾಡುತ್ತೇನೆ. ಕಾಂತೇಶ್ ಗೆ ಟಿಕೆಟ್ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡ್ತೇನೆ. ಈಶ್ವರಪ್ಪ ಬರೋಕೆ ಹೇಳಿ, ನಾನೇ ದೆಹಲಿಗೆ ಕರೆದುಕೊಂಡು ಹೋಗ್ತೇನೆ.ಅಮಿತ್ ಶಾ ಮೀಟ್ ಮಾಡಿಸುತ್ತೇನೆ. ಮೀಟ್ ಮಾಡಿದಾಗ ಮನವಿ ಮಾಡಲು ಅನುಕೂಲ ಆಗುತ್ತದೆ ಎಂದಿದ್ದಾರೆ. ಈಗ ಈಶ್ವರಪ್ಪ ಏನು‌ಮಾಡ್ತಾರೆ ಎಂಬುದು ಕಾದು ನೋಡಬೇಕಿದೆ.

ಇದನ್ನೂ ಓದಿ-https://suddilive.in/archives/10430

Related Articles

Leave a Reply

Your email address will not be published. Required fields are marked *

Back to top button