‘ಶಾಹೀ’ ಮಾತ್ರವಲ್ಲ ಎಂತಹ ತನಿಖೆಗೂ ಸಿದ್ದ-ರಾಘವೇಂದ್ರ
ಸುದ್ದಿಲೈವ್/ಶಿವಮೊಗ್ಗ
ಎಲ್ಲವೂ ತನಿಖೆಯಲ್ಲಿಯೇ ಕಾಂಗ್ರೆಸ್ ಪಕ್ಷ ಕಾಲಕಳೆದಿದೆ ಎಂದು ರಾಘವೇಂದ್ರ . ನಾಚಿಕೆ ಆಗಬೇಕು ಎಂದು ಛೀಮಾರಿ ಹಾಕಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೈತರಿಗೆ ಪ್ರೋತ್ಸಹಧನವನ್ನ 650 ಕೋಟಿ ಬಾಕಿ ಉಳಿದಿದೆ. ರೈತರಿಗೆ ಸಹಾಯ ಮಾಡಿ ಎಂದು ಆಗ್ರಹಿಸಿದ ಅವರು ಎಂಪಿಎಂ, ವಿಐಎಸ್ ಎಲ್ ಮುಚ್ಚಿಹೋಗಿದೆ. ಇಂತಹ ಆರೋಪಗಳನ್ನ ಮಾಡಿದರೆ ಯಾರು ಬರ್ತಾರೆ.
ಇಲ್ಲಿ ಯಾವ ಹಿತಾಸಕ್ತಿ ಇಲ್ಲ. ವಿಮಾನ ನಿಲ್ದಾಣ ತನಿಖೆ ಮಾಡ್ತೀನಿ ಎನ್ನುತ್ತಿದ್ದಾರೆ. 725 ಕೋಟಿ ವೆಚ್ಚದಲ್ಲಿ ವಿಮಾನ ನಿಲ್ದಾಣವಾಗಿದೆ. 350 ಎಕರೆಯಲ್ಲಿ ವಿಮಾನ ನಿಲ್ದಾಣ ಮಾಡಬಹುದಿತ್ತು. ಆದರೆ 25 ವರ್ಷದ ದೂರಾಲೋಚನೆಯಿಂದಾಗಿ ದೊಡ್ಡ ವಿಮಾನ ನಿಲ್ದಾಣ ಮಾಡಲಾಗಿದೆ ಎಂದರು.
ರೈಲ್ವೆ ಓವರ್ ಬ್ರಿಡ್ಜ್ ವಿಷಯದಲ್ಲಿ ಸೇತುವೆ ನಿರ್ಮಾಣವನ್ನ ಅನುಮಾನಿಸಿ ತನಿಖೆ ನಡೆಸಲಾಯಿತು. ಏನೂ ಸಿಗಲಿಲ್ಲ. ಈಗ ಕಾಂಗ್ರೆಸ್ ನಾಯಕರು ಶಾಹೀ ಹಿಡಿದಿದ್ದಾರೆ. ಎಂತಹ ತನಿಖೆಗೂ ಸಿದ್ಧ ಎಂದು ಕಾಂಗ್ರೆಸ್ ನಾಯಕರಿಗೆ ಟಕ್ಕರ್ ನೀಡಿದರು.
ಕಾಂಗ್ರೆಸ್ ನಲ್ಲಿದ್ದ ಐಡಿಯಲ್ ಗೋಪಿ, ಲೋಕೇಶ್, ರಾಮು, ಶಿವರಾಜ್ ಗೌತಮ್, ಅನಿರುದ್ದ ಮೊದಲಾದವರು ಸಂಸದರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು.
ಇದನ್ನೂ ಓದಿ-https://suddilive.in/archives/12133