ರಸ್ತೆ ಅಪಘಾತ ಓರ್ವ ಸಾವು
ಸುದ್ದಿಲೈವ್/ಶಿವಮೊಗ್ಗ
ಸಕ್ರಬೈಲಿನ ಬಳಿ ಕಾರೊಂದು ಮರಕ್ಕೆ ಡಿಕ್ಕಿಹೊಡೆದಿದ್ದು ಅಪಘಾತದಲ್ಲಿ ವ್ಯಕ್ತಿಯೋರ್ವ ಸಾವು ಕಂಡಿರುವ ಘಟನೆ ನಡೆದಿದೆ.
ಈಗ್ಗೆ 1 ವರ್ಷದಿಂದ ಹೊಸಮನೆ 5 ನೇ ಕ್ರಾಸ್ ನಲ್ಲಿರುವ ಸಾಗರ್ ರವರ ಮಾಲೀಕತ್ವದ ಶಿವಮೊಗ್ಗ ಸಿಟಿ ಎಂಟರ್ ಪ್ರೈಸಸ್ ಸರ್ವಿಸ್ ಸೆಂಟರ್ ಎಂಬುದನ್ನ ಕಿರಣ್ ಎಂಬುವರು ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದರು.
ಒಂದು ವಾರದ ಹಿಂದೆ ಅವರ ಊರಾದ ಕುಂದಾಪುರಕ್ಕೆ ಹೋಗಿದ್ದು. ಶಿವಮೊಗ್ಗದಲ್ಲಿ ಸಾಗರ್ ಮಾಲೀಕತ್ವದ ಶಿವಮೊಗ್ಗ ಸಿಟಿ ಎಂಟರ್ ಪ್ರೈಸಸ್ ಸರ್ವೀಸ್ ಸೆಂಟರ್ ತುಂಬಾ ಲಾಸ್ ನಲ್ಲಿ ಇದ್ದುದ್ದರಿಂದ ಅದನ್ನು ಕ್ಲೋಸ್ ಮಾಡಿಕೊಂಡು ಅಲ್ಲಿದ್ದ ಸಾಮಾನು ಗಳನ್ನು ವಾಪಸ್ ತರುವ ಸಲುವಾಗಿ ಮಾಲೀಕ ಸಾಗರ್, ಕಿರಣ್ ಮತ್ತೊಬ್ಬ ಸ್ನೇಹಿತ ಉಮೇಶ ರವರು ಮೊನ್ನೆ ಬೆಳಗಿನ ಜಾವ 1-00 ಗಂಟೆಗೆ ಮಂಗಳೂರಿನಿಂದ ಸಾಗರ್ ರವರ ಕೆಎ-19-ಎಂಎಂ-0574 ನೋಂದಣಿ ಸಂಖ್ಯೆಯ ಹುಂಡೈ ವೆನೋ ಕಾರ್ ನಲ್ಲಿ ಹೊರಟಿದ್ದರು.
ಕಿರಣ್ ಉಡುಪಿಯಲ್ಲಿ ಕಾರನ್ನು ಹತ್ತಿಕೊಂಡಿದ್ದು ಕಿರಣ್, ಸಾಗರ್ ಮತ್ತು ಉಮೇಶ ರವರು ಕಾರಿನಲ್ಲಿ ಶಿವಮೊಗ್ಗಕ್ಕೆ ಹೊರಟಿದ್ದಾರೆ. ಮಾಲೀಕ ಸಾಗರ್ ಕಾರನ್ನು ಚಾಲನೆ ಮಾಡುತ್ತಿದ್ದು ಉಮೇಶ ರವರು ಚಾಲಕನ ಪಕ್ಕದ ಸೀಟಿನಲ್ಲಿ ಹಾಗೂ ಕಿರಣ್ ಕಾರ್ ನ ಹಿಂಬದಿ ಸೀಟಿನಲ್ಲಿ ಕುಳಿತುಕೊಂಡಿದ್ದರು,
ಬೆಳಿಗ್ಗೆ, ಸುಮಾರು 4-00 ಗಂಟೆ ಸಮಯದಲ್ಲಿ ಶಿವಮೊಗ್ಗದ ಮಂಡಗದ್ದೆ ದಾಟಿ ಶಿವಮೊಗ್ಗ ನಗರದ ಕಡೆಗೆ ಬರುವಾಗ ಹುಲಿಹಳ್ಳ ಕ್ರಾಸ್ ಬಳಿ ಬರುತ್ತಿದ್ದಾಗ ಎದುರಿನಿಂದ ಬಂದ ವಾಹನದ ಲೈಟ್ ನ ಬೆಳಕಿಗೆ ದಾರಿ ಕಾಣದೆ ರಸ್ತೆ ಬದಿಯಲ್ಲಿದ್ದ ಮರವೊಂದಕ್ಕೆ ಸಾಗರ್ ಕಾರನ್ನ ಡಿಕ್ಕಿ ಹೊಡೆಸಿದ್ದಾರೆ
ಚಾಲಕನ ಪಕ್ಕದ ಸೀಟ್ ನಲ್ಲಿ ಕುಳಿತಿದ್ದ ಉಮೇಶ ರವರಿಗೆ ತಲೆಗೆ ಪೆಟ್ಟು ಬಿದ್ದು ಕಿವಿಯಲ್ಲಿ ಮತ್ತು ಮೂಗಿನಲ್ಲಿ ರಕ್ತ ಬಂದಿದೆ. ಎಡ ಭುಜದ ಬಳಿ ಪೆಟ್ಟು ಬಿದ್ದಿದ್ದು ಕಾರ್ ಚಾಲನೆ ಮಾಡುತ್ತಿದ್ದ ಸಾಗರನಿಗೂ ಸಹ ಸಣ್ಣ ಪುಟ್ಟ ಪೆಟ್ಟು ಬಿದ್ದಿದೆ. ಕಾರಿನ ಹಿಂಬದಿ ಕುಳಿತಿದ್ದ ಕಿರಣ್ ಗೂ ಸಹ ಒಳಪೆಟ್ಟಾಗಿರುತ್ತೆ, ನಂತರ ಅಲ್ಲಿದ್ದ ಸ್ಮಳಿಯರು ಅಂಬುಲೆನ್ಸ್ ಗೆ ಕರೆ ಮಾಡಿದ್ದು ಅಂಬುಲೆನ್ಸ್ ನಲ್ಲಿ ಮೂವರು ಸೇರಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ಆಸ್ಪತ್ರೆಯಲ್ಲಿನ ವೈದ್ಯರು ಉಮೇಶ ರವರನ್ನು ಪರೀಕ್ಷಿಸಿ ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ರಸ್ತೆ ಅಘಾತದಲ್ಲಿ ಉಮೇಶ್ ಸಾವನ್ನಪ್ಪಿದ್ದು ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಇದನ್ನೂ ಓದಿ-https://suddilive.in/archives/12914