ರಾಷ್ಟ್ರೀಯ ಸುದ್ದಿಗಳು

ತಿರುಪತಿಗೆ ವಿಮಾನ ಹಾರಾಟ ರದ್ದು-ಲಗೇಜ್ ಹಿಡಿದೇ ಪ್ರಯಾಣಿಕರಿಂದ ಪ್ರತಿಭಟನೆ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಗೋಳು ಮುಗಿಯುವ ಹಾಗೆ ಕಾಣ್ತಾ‌ಇಲ್ಲ. ಇಂದು ತಿರುಪತಿಗೆ ಹೋಗುವ ಸ್ಟಾರ್ ಏರ್ ಫ್ಲೈಟ್ ರದ್ದಾಗಿದೆ ಇದರಿಂದ ಪ್ರಯಾಣಿಕರು ಪ್ರತಿಭಟನೆ ನಡೆಸಿದ್ದಾರೆ.

ತಿರುಪತಿಗೆ ಹೋಗಲು ಇಂದು ಮಧ್ಯಾಹ್ನ 1-30 ಗಂಟೆಗೆ ಫ್ಲೈಟ್ ಹಾರಬೇಕಿತ್ತು‌ ಆದರೆ ಹಾರಲಿಲ್ಲ. ಕಾರಣ ತಿರುಪತಿಗೆ ಹಾರಬೇಕಿದ್ದ ಪ್ರಯಾಣಿಕರ ಸಂಖ್ಯೆ 13 ಇರುವುದರಿಂದ ರದ್ದಾಗಿದೆ. ಆದರೆ ನಿಲ್ದಾಣದ ಒಳಗೆ ಕುಳಿತಿದ್ದ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲಗೇಜ್ ಹಿಡಿದು ಪ್ರಯಾಣಿಕರು ತಿರುಪತಿಗೆಹೋಗಲು ಅವಕಾಶ ಮಾಡಿಕೊಡುವಂತೆ ಆಗ್ರಹಿಸಿದ್ದಾರೆ.ಆನ್ ಲೈನ್ ಟಿಕೇಟ್ 2200 ರಿಂದ 3500 ಇದೆ.‌ ಈಗಾಗಲೇ ಗೋವಾಕ್ಕೆ ಹೋಗುವಂತೆ ಏರ್ ಪೋರ್ಟ್ ಅಧಿಕಾರಿಗಳು ತಿಳಿಸಿದ್ದರಿಂದ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ನೈಟ್ ಲ್ಯಾಂಡಿಂಗ್ ರದ್ದಾಗುತ್ತಿರುವ ಬೆನ್ಬಲ್ಲೇ ಈ ಅವಾಂತರ ಕಂಡು ಬಂದಿದೆ.ಈ ಎಲ್ಲಾ ಸಮಸ್ಯೆ ಬಗೆಹರಿಸದಿದ್ದರೆ ವಿಮಾನ ನಿಲ್ದಾಣ ಉದ್ದಾರ ಆಗೋದು ಕಷ್ಟವಿದೆ.

ಇದನ್ನೂ ಓದಿ-https://suddilive.in/archives/6297

Related Articles

Leave a Reply

Your email address will not be published. Required fields are marked *

Back to top button