ಕ್ರೈಂ ನ್ಯೂಸ್

ಶಾಸಕ ಸಂಗಮೇಶ್ವರ್ ಅವರ ಆಪ್ತ ಸಹಾಯಕ ರಸ್ತೆ ಅಪಘಾದಲ್ಲಿ ಸಾವು

ಸುದ್ದಿಲೈವ್/ಭದ್ರಾವತಿ/26/12/23

ಶಾಸಕ ಬಿ.ಕೆ.ಸಂಗಮೇಶ್ವರ್ ಅವರ ಆಪ್ತ ಸಹಾಯಕ ಈಶ್ವರ್ ರಸ್ತೆ ಅಪಘಾದಲ್ಲಿ ಸಾವನ್ನಪ್ಪಿದ್ದು ಶಾಸಕರ ಕುಟುಂಬಕ್ಕೂ ಆಘಾತ ನೀಡಿದೆ. ಆಪ್ತ ಸಹಾಯಕನ ದುರ್ಮರಣವನ್ನ ಶಾಸಕರು ಈಶ್ವರ್ ಅವರ ದಿಡೀರ್ ಸಾವಿನ ದುಃಖವ್ನ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಹಂಚಿಕೊಂಡದ್ದಾರೆ.

ಈಶ್ವರ್ ಕೂಡ್ಲಿಗೆರೆಯಿಂದ ಭದ್ರಾವತಿಗೆ ಬೈಕ್ ನಲ್ಲಿ ಬರುವಾಗ ಲಾರಿ ಡಿಕ್ಕಿ ಹೊಡೆದಿದೆ. ತಕ್ಷಣವೇ ಆವರನ್ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾದರೂ ಸಹ ಅವರನ್ನ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈಶ್ವರ್ ಅವರ ಮೃತ ದೇಹ ಭದ್ರಾವತಿಯ ಸಾರ್ವಜನಿಕ ಆಸ್ಪತ್ರೆಯಲ್ಲಿರುವ ಮರಣೋತ್ತರ ಪರೀಕ್ಷೆಯ ಕೇಂದ್ರದಲ್ಲಿರಿಸಲಾಗಿದೆ.

ಆಪ್ತ ಸಹಾಯಕನಾದ ಈಶ್ವರ್ ನ ದುರ್ಮರಣದ ಬಗ್ಗೆ ಶಾಸಕರು ಸಂತಾಪ ಮತ್ತು ದುಃಖವನ್ನ‌ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣ ಫೇಸ್ ಬುಕ್ ಪೇಜ್ ನಲ್ಲಿ ನನಗೆ ಶಕ್ತಿಯಾಗಿ, ನನ್ನ‌ ಬೆನ್ನಲುಬಾಗಿ ನಿಂತಿದ್ದ ಈಶ್ವರ್  ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅವರ ಆತ್ಮಕ್ಕೆ ಶಾಂತಿಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ-https://suddilive.in/archives/5465

Related Articles

Leave a Reply

Your email address will not be published. Required fields are marked *

Back to top button