ಸ್ಥಳೀಯ ಸುದ್ದಿಗಳು

30 ನಿಮಿಷದಿಂದ ಶಿವಮೊಗ್ಗದಲ್ಲಿ ಗುಡುಗು ಸಿಡಿಲು ಸಹಿತ ಮಳೆ

ಸುದ್ದಿಲೈವ್/ಶಿವಮೊಗ್ಗ

ಗುಡುಗು ಸಿಡಿಲಿನೊಂದಿಗೆ ಶಿವಮೊಗ್ಗದಲ್ಲಿ ಮಳೆ ಆರ್ಭಟಿಸುತ್ತಿದೆ. ಕಳೆದ 30 ನಿಮಿಷ ಸತತ ಮಳೆ ಸುರಿಯುತ್ತಿದ್ದ ಬಿಸಿಲಿನ ಬೇಗೆಗೆ ಮರುಣ ತಂಪೆರೆದಿದ್ದಾನೆ.

ಕಳೆದ ಮೂರು ನಾಲ್ಕು ದಿನಗಳಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಮಳೆಯಾಗುತ್ತಿದೆ. ಬಿಸಿಲಿನ ಬೇಗೆಗೆ ಬೆಂದುಹೋಗಿರುವ ಜನರಿಗೆ ಮಳೆರಾಯ ತಂಪೆರದರೂ ತಾಪಮಾನದ ಹಿನ್ನಲೆಯಲ್ಲಿ ಮತ್ತೆ ಮರುದಿನ ಬಿಸಿಲಿನ ಝಳ ಹೆಚ್ಚಾಗುತ್ತಿದೆ.

ಮೂರು ನಾಲ್ಕು ದಿನಗಳ ಮಳೆಯಿಂದಾಗಿ, ಕುರಿಗಳು ಸಾವುಕಂಡಿವೆ. ಕುಂಸಿ ಭಾಗದಲ್ಲಿ ಮರದ ಕೆಳಗೆ ಇದ್ದ 18 ಕ್ಕೂ ಹೆಚ್ಚು ಕುರಿಗಳು ಸಿಡಲು ಬಡಿದು ಸಾವಾಗಿವೆ. ಹಸುಗಳು ಸಾವಾಗಿವೆ. ನಿನ್ನೆ ತೀರ್ಥಹಳ್ಳಿಯ ಕೋಣಂದೂರಿನಲ್ಲಿ ಮಳೆ ಗಾಳಿಯಿಂದ ವ್ಯಕ್ತಿ ಸಾವಾಗಿದೆ.

ಇವತ್ತಿನ ಅನಾಹುತಗಳ ಬಗ್ಗೆ ವರದಿಯಾಗ ಬೇಕಿದೆ. ಸಿಡಿಲಿನ ಅಬ್ಬರ ಜೋರಾಗಿದೆ.

ಇದನ್ನೂ ಓದಿ-https://suddilive.in/archives/13199

Related Articles

Leave a Reply

Your email address will not be published. Required fields are marked *

Back to top button