ರಾಜ್ಯ ಸುದ್ದಿಗಳು

ನೇಹಾ ಹತ್ಯೆ ಖಂಡಿಸಿ ನಾಳೆ ಹಿಂಜಾವೇ ವತಿಯಿಂದ ಪ್ರತಿಭಟನೆ

ಸುದ್ದಿಲೈವ್/ಶಿವಮೊಗ್ಗ

ಹುಬ್ಬಳ್ಳಿಯಲ್ಲಿ ನಡೆದ ನೇಹಾಳ ಹತ್ಯೆಯನ್ನು ಖಂಡಿಸಿ ನಾಳೆ ಹಿಂಜಾವೇ ರಾಜ್ಯಾದ್ಯಂತ (ಹಿಂದೂ ಜಾಗರಣ ವೇದಿಕೆ) ಪ್ರತಿಭಟನೆಗೆ ಕರೆ ನೀಡಿದ್ದು, ಅದರಂತೆ ಶಿವಮೊಗ್ಗದಲ್ಲೂ ಸಂಘಟನೆ ಪ್ರತಿಭಟನೆ ನಡೆಸಲಿದೆ.

ಹುಬ್ಬಳ್ಳಿಯ ಕಾಂಗ್ರೆಸ್ ಪಕ್ಷದ ನಗರ ಪಾಲಿಕೆ ಸದಸ್ಯರಾದ ಶ್ರೀ ನಿರಂಜನ್ ಹಿರೇಮಠರ ಪುತ್ರಿಯಾದ ನೇಹಾ ರವರನ್ನು ಹಾಡು ಹಗಲೇ ಭೀಕರವಾಗಿ ಹತ್ಯೆ ಮಾಡಲಾಗಿದ್ದು ಈ ಹತ್ಯೆಯನ್ನು ಖಂಡಿಸಿ, ರಾಜ್ಯದಲ್ಲಿ ಕಾಲೇಜು ಕೇಂದ್ರೀಕರಿಸಿ ನಡೆಯುತ್ತಿರುವ ಲವ್ ಜಿಹಾದ್ ನ ವಿರುದ್ಧ ನಾಳೆ(20.04.2024) ಜಿಲ್ಲಾ ಕೇಂದ್ರದಲ್ಲಿ ಹಿಂದು ಜಾಗರಣ ವೇದಿಕೆಯಿಂದ ಪ್ರತಿಭಟನೆಗೆ ಕರೆ ನೀಡಿದೆ.

ನಾಳೆ ಸಂಜೆ 5:30ಕ್ಕೆ, ನಗರದ ಬಿ.ಹೆಚ್ ರಸ್ತೆಯ ಶಿವಪ್ಪ ನಾಯಕ ಸರ್ಕಲ್ ನಲ್ಲಿ ಹಿಂಜಾವೇ ಪ್ರತಿಭಟನೆಗೆ ಕರೆ ನೀಡಿದ್ದು, ಎಲ್ಲಾ ಹಿಂದೂ ಬಾಂಧವರು ಈ ಒಂದು ಪ್ರತಿಭಟನೆಗೆ ಆಗಮಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಲವ್ ಜಿಹಾದ್ನ ವಿಚಾರವಾಗಿ ಹಿಂದೂ ಸಮಾಜವನ್ನು ಜಾಗೃತಿಗೊಳಿಸುವಂತೆ ಕೋರಿದೆ.

ಇದನ್ನೂ ಓದಿ-https://suddilive.in/archives/13191

Related Articles

Leave a Reply

Your email address will not be published. Required fields are marked *

Back to top button