ಚುನಾವಣೆಗೆ ನಿಲ್ಲುವ ಧೈರ್ಯ ಮಾಡದಂತೆ ರಾಘಣ್ಣನ ಗೆಲ್ಲಿಸಿ ಎಂದು ಬಿಎಸ್ ವೈ ಕರೆ ನೀಡಿದ್ದೇಕೆ?
ಸುದ್ದಿಲೈವ್/ಶಿವಮೊಗ್ಗ
ಇತರರು ಚುನಾವಣೆಗೆ ನಿಲ್ಲುವ ಧೈರ್ಯ ಮಾಡಬಾರದು ಹಾಗೆ ಸಂಸದ ರಾಘವೇಂದ್ರರನ್ನ ಗೆಲ್ಲಿಸಿಕೊಡಬೇಕು ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಶಿವಮೊಗ್ಗದಲ್ಲಿ ಕರೆ ನೀಡಿದ್ದಾರೆ. ಈ ಕರೆ ಯಾರ ವಿರುಧ್ಧ ಎಂಬ ಚರ್ಚೆಗೆ ಕಾರಣವಾಗಿದೆ.
ಗೋಪಿ ವೃತ್ತದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆಯ ಹಿನ್ನಲೆಯಲ್ಲಿ ಬಹಿರಂಗ ಸಭೆಯಲ್ಲಿ ಮಾತನಾಡಿದ ಯಡಿಯೂರಪ್ಪನವರ ಈ ಕರೆ ಯಾರ ವಿರುದ್ಧ ಎಂಬ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಪುತ್ರನ ವಿರುದ್ಧ ಸ್ಪರ್ಧಿಸುತ್ತಿರುವ ಈಶ್ವರಪ್ಪನವರಿಗೋ ಅಥವಾ ಕಾಂಗ್ರೆಸ್ ಅಭ್ಯರ್ಥಿಗೋ ಎಂಬುದು ತಿಳಿಯಬೇಕಿದೆ.
ಪ್ರತಿ ಭಾರಿಯೂ ಈ ರೀತಿಯ ಕರೆ ನೀಡುವುದು ಬಿಎಸ್ ವೈ ಅವರ ಜಾಯಮಾನವಾದರೂ ಅವರ ತವರು ಕ್ಷೇತ್ರದಲ್ಲಿಯೇ ಸೆಡ್ಡು ಹೊಡೆದಿರುವ ಈಶ್ವರಪ್ಪನವರು ಸ್ಪರ್ಧಿಸುತ್ತಿರುವುದರಿಂದ ಈ ಹೇಳಿಕೆ ಗಮನಸೆಳೆದಿದೆ.
ಈ ಮೆರವಣಿಗೆ ನೋಡಿದ ಮೇಲೆ ಬಿ ವೈ ರಾಘವೇಂದ್ರ 3 ಲಕ್ಷ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ. ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗಾಗಿದೆ. ದೇಶದ ಪ್ರಧಾನಿ ಅಭ್ಯರ್ಥಿ ಕಾಂಗ್ರೆಸ್ ಬಳಿ ಇಲ್ಲ ಎಂದರು.
ಬಿಜೆಪಿ ಬಳಿ ಶಕ್ತಿ ಶಾಲಿ ವಿಶ್ವ ನಾಯಕ ಮೋದಿ ಇದ್ದಾರೆ. 28 ಸ್ಥಾನ ಬಿಜೆಪಿ ಮೈತ್ರಿ ಗೆಲ್ಲುತ್ತದೆ. ಚುನಾವಣೆ ನಿಲ್ಲುವ ಧೈರ್ಯ ಮಾಡಬಾರದು..ಆ ರೀತಿಯಲ್ಲಿ ಕ್ಷೇತ್ರದ ಜನರು ಮತ ನೀಡುವಂತೆ ಬಿಎಸ್ ವೈ ಮನವಿ ಮಾಡಿದರು.
ಇದನ್ನೂ ಓದಿ-https://suddilive.in/archives/13116