ನಾನು ಮಾಡಿರುವ ತಪ್ಪಾದರು ಏನು ಎಂದು ಬಿಎಸ್ ವೈ ಉತ್ತರಿಸಲಿ-ಕಾಂತೇಶ್
ಸುದ್ದಿಲೈವ್/ಶಿವಮೊಗ್ಗ
ಈಗಿನ ಎಂಪಿ ಕರೆ ಮಾಡಿ ನಿನೆಗೆ ಹಾವೇರಿ ಲೋಕಸಭಾ ಟಿಕೇಟ್ ಆಗಿದೆ ಎಂದು ದೇವರ ಮೇಲೂ ಆಣೆ ಮಾಡಿ ಮೋಸ ಮಾಡಿದ್ದಾರೆ. ನಂತರ ಟಿವಿಯಲ್ಲಿ ಪ್ರಕಟವಾಗಿದ್ದು ಬಸವರಾಜ್ ಬೊಮ್ಮಾಯಿ ಹೆಸರು ಎಂದು ಮಾಜಿ ಡಿಸಿಎಂ ಈಶ್ವರಪ್ಪನವರ ಪುತ್ರ ಕಾಂತೇಶ್ ತಿಳಿಸಿದರು.
ನಗರದ ಶುಭಮಂಗಳದಲ್ಲಿ ರಾಷ್ಟ್ರಭಕ್ತರ ಬಳಗದವತಿಯಿಂದ ಹಮ್ಮಿಕೊಳ್ಳಲಾದ ನಗರ ಮಟ್ಟದ ಮಹಿಳಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.
ಅಏಕ ವರ್ಷದ ಸಂಬಂಧ ಓಂ ಶಕ್ತಿ ತಾಯಿ ದರ್ಶನಕ್ಕೆ ಪ್ರವಾಸ ಮಾಡಿಸುವ ಕೆಲಸ ಮಾಡಿಕೊಂಡು ಬಂದಿದ್ದೇವೆ. ಈ ಬಾರಿಯೂ ಕೂಡ ದೇಶದಲ್ಲಿ ಮೋದಿ ಪ್ರಧಾನಿ ಆಗಬೇಕು ಅಪ್ಪಾಜಿ (ಈಶ್ವರಪ್ಪ) ಸಂಸದರಾಗಬೇಕು ಎಂದು ದೇವರಲ್ಲಿ ಕೇಳಿಕೊಂಡು ಬಂದಿದ್ದೇವೆ ಎಂದರು.
ಇನ್ನೂ ಒಳ್ಳೆಯದಿದೆ ಎಂದು ಅಂದು ಕೊಂಡಿದ್ದೀನಿ. ಏ.12 ರಂದು ರಾಮಣ್ಣ ಶ್ರೇಷ್ಠಿ ಪಾರ್ಕ್ ನಿಂದ ಮೆರವಣಿಗೆ ಹೊರಟು ನಾಮಪತ್ರ ಸಲ್ಲಿಸಲಾಗುತ್ತಿದೆ ಎಂದರು. ಆದರೆ 25 ಸಾವಿರ ಜನ ಸೇರಿಸುವ ಕಾರ್ಯಕ್ರಮ ಎಂದು ಘೋಷಿಸಲಾಗಿತ್ತು. ಆದರೆ ಕಾಂತೇಶ್ 15 ಸಾವಿರ ಜನ ಸೇರಿಸಿ ನಾಮಪತ್ರ ಸಲ್ಲಿಸುವುದಾಗಿ ಹೇಳಿರುವುದುಅಚ್ಚರಿ ಹುಟ್ಟಿಸಿದೆ.
ನಾನು ಮಾಡಿದ ತಪ್ಪೇನು ಎಂಬಿದನ್ನ ಬಿಎಸ್ ವೈ ಉತ್ತರಿಸಬೇಕು. 100 ಕ್ಕೆ ನೂರು ರಷ್ಟು ನಿಮ್ಮಕಷ್ಟ ಸುಖಗಳಿಗೆ ಸ್ಪರ್ಧಿಸುವುದಾಗಿ ಕಾಂತೇಶ್ ಹೇಳಿದರು.
ಇದನ್ನೂ ಓದಿ-https://suddilive.in/archives/11968