ಸ್ಥಳೀಯ ಸುದ್ದಿಗಳು

ಹಿರಿಯ ಗ್ರಾಮಸ್ಥರ ಕಾಲಿಗೆ ನಮಸ್ಕರಿಸಿದ ಬಿ.ವೈ.ರಾಘವೇಂದ್ರ, ವೃದ್ಧೆಯ ಸಕ್ಕತ್ ಸ್ಟೆಪ್ಸ್!

ಸುದ್ದಿಲೈವ್/ಶಿವಮೊಗ್ಗ

ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರು ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಬುಧವಾರ ಶಿಕಾರಿಪುರ ತಾಲೂಕಿನ ಚುರ್ಚುಗುಂಡಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ಗ್ರಾಮದ ಹಿರಿಯ ಗ್ರಾಮಸ್ಥರೋರ್ವರ ಕಾಲಿಗೆ ನಮಸ್ಕರಿ ನಾಮಪತ್ರ ಸಲ್ಲಿಕೆ ಕಾರ್ಯಕ್ಕೆ ಆಗಮಿಸುವಂತೆ ಕೋರಿದ ಘಟನೆ ನಡೆಯಿತು.

ಶಿಕಾರಿಪುರದ ಚುರ್ಚುಗುಂಡಿ ಗ್ರಾಮದಲ್ಲಿ ಆಯೋಜಿಸಿದ್ದ ವೀರಭದ್ರೇಶ್ವರ ಮತ್ತು ಭದ್ರಕಾಳಿ ಅಮ್ಮನವರ ಜಾತ್ರಾ ಮಹೋತ್ಸವದಲ್ಲಿ ಬಿ.ವೈ.ರಾಘವೇಂದ್ರ ಭಾಗವಹಿಸಿದ್ದರು. ಜಾತ್ರೆಯಲ್ಲಿ ಭಾಗವಹಿಸಿ ಹಿಂದಿರುಗುವ ವೇಳೆ, ಮಾರ್ಗಮಧ್ಯೆ ಎದುರಾದ ಗ್ರಾಮದ ಹಿರಿಯರೋರ್ವರ ಬಳಿ ಆಗಮಿಸಿ ಅವರ ಕಾಲಿಗೆ ನಮಸ್ಕರಿಸಿ ಗುರುವಾರ ನಾಮಪತ್ರ ಸಲ್ಲಿಕೆ ಕಾರ್ಯದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ಶಿವರಾಜಕುಮಾರ್ ಹಾಡಿಗೆ ವೃದ್ದೆಯ ಭರ್ಜರಿ ಸ್ಟೆಪ್ಸ್!

ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಕೂಡ್ಲಿ ಕ್ರಾಸ್ ನಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಚಿತ್ರನಟ ಶಿವರಾಜಕುಮಾರ್ ಭಾಗವಹಿಸಿದ್ದರು. ಈ ವೇಳೆ ಅವರು ಹಾಡು ಹಾಡುವ ವೇಳೆ, ವೃದ್ದೆಯೋರ್ವರು ಭರ್ಜರಿ ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದಾರೆ. ವೃದ್ದೆಯ ಸ್ಟೆಪ್ಸ್ ಗೆ ನೆರೆದಿದ್ದವವರು ಚಪ್ಪಾಳೆ ತಟ್ಟಿ ಹುರಿದುಂಬಿಸಿದ್ದಾರೆ.

ಚಿತ್ರನಟ ಶಿವರಾಜಕುಮಾರ್ ಅವರು, ಶಿವಮೊಗ್ಗ ಲೋಕಸಭಾ ಕ್ಷೇತ್ರದಾದ್ಯಂತ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಪತ್ನಿ ಗೀತಾ ಶಿವರಾಜಕುಮಾರ್ ಅವರ ಪರ ಬಿರುಸಿನ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಕೂಡ್ಲಿ ಕ್ರಾಸ್ ಬಳಿ ನಡೆದ ಸಮಾವೇಶದಲ್ಲಿ, ಶಿವಣ್ಣ ಅವರು ರಾಜ್ ಕುಮಾರ್ ಅಭಿನಯದ ‘ಯಾರೇ ಕೂಗಡಲಿ ಊರೇಹೋರಾಡಲಿ’  ಹಾಡಿಗೆ ವೃದ್ಧೆ ಸಕ್ಕತ್ ಸ್ಟೆಪ್ಸ್ ಹಾಕಿದ್ದಾರೆ.

ಸಿನಿಮಾ ಗೀತೆಗಳ ಗಾಯನದ ಮೂಲಕ ನೆರೆದಿದ್ದವರನ್ನು ರಂಜಿಸಿದರು. ಈ ವೇಳೆ ವಯೋವೃದ್ದೆಯೋರ್ವರು ಮಾಡಿದ ಡ್ಯಾನ್ಸ್ ಎಲ್ಲರ ಗಮನ ಸೆಳೆಯಿತು. ಸದ್ಯ ಸದರಿ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ-https://suddilive.in/archives/13111

Related Articles

Leave a Reply

Your email address will not be published. Required fields are marked *

Back to top button