ಸಹೋದರಿ ಪರವಾಗಿ ಸಚಿವರ ಭರ್ಜರಿ ಮತಯಾಚನೆ
ಸುದ್ದಿಲೈವ್/ಶಿವಮೊಗ್ಗ
ನೀವೆ ನಮ್ಮ ತಂದೆ ಸ್ಥಾನದಲ್ಲಿ ಇದ್ದೀರ. ಹಾಗಾಗಿ ಗೀತಕ್ಕನಿಗೆ ಹೆಚ್ಚಿನ ಮತ ನೀಡಿ ಗೆಲ್ಲಿಸಬೇಕು ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಅವರು ಕುಂಚೇನಹಳ್ಳಿಯಲ್ಲಿ ಲೋಕಸಭ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಿ ಮಾತನಾಡಿದರು. ನಿಮ್ಮ ಮಡಿಲಿಗೆ ಗೀತಾ ಶಿವರಾಜ್ ಕುಮಾರ್ ಅವರನ್ನ ಹಾಕಿದ್ದೇವೆ. ನಿಮ್ಮ ಮಡಿಲಿಗೆ ಹಾಕಿದ ಮಗುವನ್ನ ರಕ್ಷಿಸುತ್ತೀರ ತಾನೆ ಎಂದು ಪ್ರಶ್ನಿಸಿದರು.
ಮುಂಚೆ ನಮ್ಮ ಕಾರ್ಯಕ್ರಮಗಳಿಗೆ ಹೆಚ್ಚಿನ ಮಹಿಳೆಯರು ಬರುತ್ತಿರಲಿಲ್ಲ. ಈಗ ಗ್ಯಾರಂಟಿಯಿಂದಾಗಿ ಈಗ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಕಾರ್ಯಕ್ರಮಕ್ಕೆ ಬರ್ತಾರೆ. ಬಂಗಾರಪ್ಪ ಉಚಿತ ವಿದ್ಯುತ್ ಕೊಟ್ಟಿದ್ದಾರೆ. ಒಳ್ಳೆ ಕಾರ್ಯಕ್ರಮ ಕೊಟ್ಟವರಿಗೆ ಆಶೀರ್ವಾದ ಮಾಡಬೇಕಲ್ವಾ ಎಂದರು.
15 ಲಕ್ಷ ಕೋಡುತ್ತೇವೆ ಅಂದವರಿಗೆ ವೋಟ್ ಹಾಕ್ತೀರಾ? ನಿಮ್ಮ ಕಷ್ಟಕ್ಕೆ ಸಹಾಯ ಮಾಡಿದವರಿಗೆ ಆಶೀರ್ವಾದ ಮಾಡುವುದು ನಿಮ್ಮ ಧರ್ಮ. ಹಾಗಾಗಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯನ್ನ ಗೆಲ್ಲಿಸಿ ಎಂದರು.
ನಮ್ಮ ಅಪ್ಪನ ಮನೆಯಿಂದ ನಾವೇನು ಹಣ ಕೊಡಲ್ಲ. ನಿಮ್ಮ ಹಣ ನಿಮಗೆ ನೀಡುತ್ತೇವೆ. ಬಂಗಾರಪ್ಪ ಜೀ ಥರ ಗೀತಕ್ಕ ನಿಮ್ಮ ಸೇವೆ ಮಾಡ್ತಾರೆ.ನಾನು ಉಸ್ತುವಾರಿ ಸಚಿವ ನನ್ನ ಬಳಿಯೇ ಕೀ ಇದೆ. ಹಣದಲ್ಲಿ, ಧರ್ಮದಲ್ಲಿ ಬಿಜೆಪಿಯನ್ನ ಸೋಲಿಸಲು ಬರುತ್ತೆ ಎಂದರು.
ರಾಮ,ಕೃಷ್ಣ ಇನ್ನು ಮೇಲೆ ನಡೆಯಲ್ಲ
ನಾವು ಸಹ ರಾಮನ ಭಕ್ತರು. ದೇವರನ್ನ ನಾವು ಬೀದಿಗೆ ತಂದು ಮತ ಕೇಳಲ್ಲ. 2024 ನೇ ಲೋಕಸಭಾ ಚುನಾವಣೆಯಲ್ಲಿ ಯಾವನು ನಮ್ಮನ್ನು ಸೋಲಿಸಲು ಆಗಲ್ಲ ಎಂದರು.
ಇದನ್ನೂ ಓದಿ-https://suddilive.in/archives/12421