ರಾಜಕೀಯ ಸುದ್ದಿಗಳು

ಹೋರಿ ಹಬ್ಬ ನೋಡಲು ಹೋದ ಯುವಕ ಸಾವು-ಜಿಲ್ಲಾಧಿಕಾರಿಗಳ ಖಡಕ್ ಮಾತು

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನಲ್ಲಿ ಕಲ್ಮನೆ ಗ್ರಾಮದಲ್ಲಿ ನಡೆದ ಹೋರಿಹಬ್ಬದಲ್ಲಿ ಯುವಕನೋರ್ವ ಸಾವನ್ನಪ್ಪಿದ್ದಾನೆ. ಈ ಸಾಬಿನ ಕುರಿತು ಜಿಲ್ಲಾಧಿಕಾರಿ ಗುರುದತ್ತ ನಾರಾಯಣ ಹೆಗಡೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಕಲ್ಮನೆ ಗ್ರಾಮದಲ್ಲಿ ಶ್ರೀಕೊಲ್ಲಾಂಭಿಕ ಮಾರಿಕಾಂಬ ದೇವಸ್ಥಾನ ಸಮಿತಿಯಿಂದ‌ ಭಾನುವಾರ ನಡೆದ ಹೋರಿ ಹಬ್ಬ ನಡೆದಿದೆ. ಈ ಹೋರಿಹಬ್ಬಕ್ಕೆ ಅನುಮತಿ ನೀಡಲಾಗಿತ್ತು. ಫೆ 7ರಂದು ಅನುಮತಿ ನೀಡಲಾಗಿತ್ತು. ಅಪಘಾತ ವಾಗದಂತೆಎಚ್ಚರಿಕೆಮತ್ತು ಮೆಡಿಕಲ್ ವ್ಯವಸ್ಥೆ ಮಾಡಿಕೊಳ್ಳಬೇಕಿತ್ತು. ಆದರೆ‌ಈ ವ್ಯವಸ್ಥೆ ಮಾಡಿಕೊಂಡಿಲ್ಲ ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿದೆ ಎಂದು ಡಿಸಿ ಹೇಳಿದ್ದಾರೆ.

ಕಲ್ಮನೆ ಗ್ರಾಮದಲ್ಲಿ ನಡೆದ ಹೋರಿ ಹಬ್ವದಲ್ಲಿ ಹೋರಿ ತಿವಿದು  ಸಾವನ್ಬಪ್ಪಿದ ಯುವಕ ಪುನೀತ್ ಆಚಾರ್ ಎಂಬುವರ ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಳ್ಳಲಾಗಿದೆ. ರೂಲ್ಸ್ ಫಾಲೋ ಮಾಡಿರುವುದನ್ನ‌ ಸಮಿತಿಯವರು ನಮಗೆ ಚಿತ್ರೀಕರಣ ಮಾಡಿಕೊಡಬೇಕಿತ್ತು.ನಮಗೆ ಮಾಹಿತಿ ನೀಡಿಲ್ಲ. ಪೊಲೀಸರ ಜೊತೆ ಚರ್ಚಿಸಿ ಮುಂದಿನ ಕ್ರಮ‌ಕೈಗೊಳ್ಳಲಾಗುವುದು ಎಂದು ಡಿಸಿ ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ಹೋರಿ ಹಬ್ಬಕ್ಕೆ ನಾಲ್ಕೈದು ಹೋರಿ ಹಬ್ಬಗಳು ಮುಂದಿನ‌ದಿನಗಳಲ್ಲಿ ಬರಲಿದ್ದು ಅದನ್ನ ಕಟ್ಟುನಿಟ್ಟಾಗಿ ನಡೆಸಲಾಗುವುದು ಎಂದು ಡಿಸಿ ತಿಳಿಸಿದ್ದಾರೆ.

ಇದನ್ನೂ ಓದಿ-https://suddilive.in/archives/8910

Related Articles

Leave a Reply

Your email address will not be published. Required fields are marked *

Back to top button