ಕ್ರೈಂ ನ್ಯೂಸ್

ಟ್ಯಾಕ್ಟರ್ ಪಲ್ಟಿ-ಓರ್ವ ಸಾವು

ಸುದ್ದಿಲೈವ್/ಶಿವಮೊಗ್ಗ

ಹೆಚ್ ಕೆ ಜಂಕ್ಷನ್ ಬಳಿ ಟ್ರ್ಯಾಕ್ಟರ್ ವೊಂದು ಪಲ್ಟಿ ಹೊಡೆದಿದ್ದು, ಓರ್ವ ಮೃತಪಟ್ಟ ಘಟನೆ ವರದಿಯಾಗಿದೆ.

ಭರತ್, ಅವರ ಮಾವ ಪ್ರಕಾಶ ಮತ್ತು ದಿಲೀಪ್, ಮನೋಜನಾಯ್ಕ ಈ ನಾಲ್ವರು‌ ತರಿಕೆರೆ ತಾಲುಕ್ ಲಿಂಗದಹಳ್ಳಿಯ ಶ್ರೀರಾಮ ಟ್ರೇಡಿಂಗ್ ರೆಡಿಮೇಡ್ ಕಾಂಪೌಂಡ್ ತಯಾರಿಸುವ ಕೂಲಿ ಕೆಲಸಕ್ಕೆ ಹೋಗುವವರು ಆಗಿದ್ದಾರೆ.

ಮಾಲಿಕರ ಆದೇಶದ ಮೇರೆಗೆ ಮಾಲಿಕರ ಕೆಎ 66 ಟಿ 3799 ನಂಬರಿನ ಟ್ರಾಕ್ಟರಗೆ ರೆಡಿಮೇಡ್ ಕಾಂಪೌಂಡ್ ವಾಲ್ ಪ್ಲೇಟ್ ಮತ್ತು ಪಟ್ಟಿಗಳನ್ನು ಲೋಡ್ ಮಾಡಿ ನಂತರ ಶಿವಮೊಗ್ಗ ತಾಲ್ಲೂಕ್ ಆಯನೂರಿಗೆ ಹೋಗಿ ಅನ್ ಲೋಡ್ ಮಾಡಿ ಬರಲು ಮಾಲಿಕರು ಸೂಚಿಸಿದ್ದರಿಂದ ನಿನ್ನೆ ಮಧ್ಯಾಹ್ನ ಚಾಲಕನಾಗಿ ಮನೋಜನಾಯ್ಕ ಇದ್ದು ಚಾಲಕನು ಟ್ರಾಕ್ಟ‌ರ್ ಇಂಜಿನ ಭಾಗದ ಬಲಗಡೆ ಭರತ್, ಎಡಗಡೆ ಭಾಗದಲ್ಲಿ ದಿಲೀಪ ಟ್ರಾಲಿಯಲ್ಲಿನ ಲೋಡ್ ಮೇಲೆ ಪ್ರಕಾಶ್ ಕುಳಿತಿದ್ದರು.

ಚಾಲಕ ಮನೋಜನಾಯ್ಕನು ಟ್ರಾಕ್ಟರನ್ನು ತರಿಕೆರೆ-ಶಿವಮೊಗ್ಗ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಲಕ್ಕವಳ್ಳಿ, ಶಂಕರಘಟ್ಟ ಮಾರ್ಗವಾಗಿ ತಮಡಿಹಳ್ಳಿ ದಾಟಿ ಹೆಚ್ ಕೆ ಜಂಕ್ಷನ್ ಗ್ರಾಮದ ಕೃಷ್ಣಪ್ಪ ರವರ ಅಡಿಕೆ ತೋಟದ ಹತ್ತಿರ ಮದ್ಯಾಹ್ನ ಸುಮಾರು 01.30 ಗಂಟೆಗೆ ಟ್ರಾಕ್ಟರನಲ್ಲಿ ಅತಿಯಾದ ಲೋಡು ಮತ್ತು ನಿಯಂತ್ರಣಕ್ಕೆ ಸಿಗದೆ ಇದ್ದ ಕಾರಣ ರಸ್ತೆಯಲ್ಲಿ ಎಡಗಡೆ ಪಲ್ಟಿಯಾಗಿ ಬಿದ್ದಿದೆ.‌

ಪಲ್ಟಿಯಾದ ಪರಿಣಾಮ ಪ್ರಕಾಶನ ಮೇಲೆ ರೆಡಿಮೇಡ್ ಕಾಂಪೌಂಡ್ ವಾಲ್ ಪ್ಲೇಟ್ ಮತ್ತು ಪಟ್ಟಿಗಳು ಬಿದ್ದು ತುಂಬಾ ರಕ್ತಗಾಯವಾಗಿದೆ. ದಿಲೀಪನು ಟ್ರ್ಯಾಕ್ಟರ ಕೆಳಗಡೆ ಸಿಕ್ಕಿಕೊಂಡು ಎದೆ, ಮುಖ ಎಲ್ಲ ರಕ್ತಗಾಯವಾಗಿದೆ. ಸ್ಥಳೀಯರು ಉಪಚರಿಸಿ ನಂತರ 108 ವಾಹನದಲ್ಲಿ ಚಿಕಿತ್ಸೆಗೆ ಸೇರಿಸಲು ಪ್ರಕಾಶ, ದಿಲೀಪ, ಭರತ್ ಮತ್ತು ಚಾಲಕ ಮಮಜನಾಯ್ಕ್ ರನ್ನ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.‌

ಮೂವರನ್ನ ಪರೀಕ್ಷಿಸಿದ ವೈದ್ಯರು ಪ್ರಕಾಶ ರವರು ಮೃತಪಟ್ಟಿರುತ್ತಾರೆಂದು ತಿಳಿಸಿದ್ದಾರೆ.‌ ದಿಲೀಪನಿಗೆ ಪ್ರಥಮ ಚಿಕಿತ್ಸೆ ನೀಡಿ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಬೇರೆ ಕಡೆ ಕರೆದುಕೊಂಡು ಹೋಗಲು ಸಲಹೆ ನೀಡಿದ್ದರಿಂದ ದಿಲೀಪನಿಗೆ ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಪ್ತಕರಣ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.‌

ಇದನ್ನೂ ಓದಿ-https://suddilive.in/archives/12322

Related Articles

Leave a Reply

Your email address will not be published. Required fields are marked *

Back to top button