ಮನೆಯೊಳಗೆ ನುಗ್ಗಿ ದಾಂದ್ಲೆ ಮಾಡಿದ ಮತ್ತು ಓಮಿನಿ ಕಾರು ಜಖಂಗೊಳಿಸಿದ ಪ್ರಕರಣ-ದೂರು ದಾಖಲು
ಸುದ್ದಿಲೈವ್/ಶಿವಮೊಗ್ಗ
ಮನೆಗೆ ನುಗ್ಗಿ ಪೀಠೋಪಕರಣಗಳ ಹಾನಿ ಮಾಡಿದ ಮತ್ತು ಓಮಿನಿ ವಾಹನಗಳನ್ನ ಜಖಂಗೊಳಿಸಿದ ಘಟನೆಗೆ ಸಂಬಂಧಿಸಿದಂತೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಎರಡು ಎಫ್ಐಆರ್ ದಾಖಲಾಗಿವೆ.
ಓರ್ವ ಮಹಿಳೆ ಮತ್ತು ಕಡ್ಡಿಮಧು ಅವರಿಂದ ಸಚಿನ್ ಯಾನೆ ಸ್ಯಾಡೋ, ಪ್ರವೀಣ ಯಾನೆ ಮೋಟು, ವಿಶಾಲ್ ಯಾನೆ ಡಾಲು, ದರ್ಶನ್ ಯಾನೆ ನಲ್ ಕುಮಾರಿ, ಸೂರಜ್ ಯಾನೆ ಸೂರು, ನಿತಿನ್ ರಾಜ್ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಾಗಿದೆ.
ಹೊಸಮನೆಯಲ್ಲಿ ಮನೆಗೆ ಬಂದ ಸಚಿನ್, ದರ್ಶನ್ ಹಾಗೂ ಇತರರು. ನಡು ರಾತ್ರಿಯಲ್ಲಿ ಬಾಗಿಲು ಬಡೆದಿದ್ದಾರೆ. ಮನೆಯ ಬಾಗಿಲು ತೆಗೆಯುತ್ತಿದ್ದಂತೆ ಕಿಟಕಿ ಗಾಜುಗಳನ್ನ ಒಡೆದು ಹಾಕಿದ್ದಾರೆ. ಸೇವಂತ್ ಎಂಬುವರು ಬಂದು ಗಲಾಟೆಯಾಕೆ ಮಾಡುತ್ತಿದ್ದೀರಿ ಎಂದು ಕೇಳಿದ್ದಕ್ಕೆ ಆತನ ಮೇಲೂ ಹಲ್ಲೆ ನಡೆಸಲಾಗಿದೆ.
ತಪ್ಪಿಸಿಕೊಳ್ಳಲು ಯತ್ನಿಸಿದ ಸೇವಂತ್ ನನ್ನ ಗಾಜಿನ ಮೇಲೆ ಎಳೆದಾಡಿದ್ದಾರೆ.ಈ ಗಲಾಟೆಯಲ್ಲಿ ಮಹಿಳೆಯ 30 ಗ್ರಾಂ ಮಾಂಗಲ್ಯ ಸರ ಕದ್ದುಕೊಂಡು ಹೋಗಿರುವ ಘಟನೆ ನಡೆದಿದ್ದು ದೂರು ದಾಖಲಾಗಿದೆ.
ಅದೇ ರೀತಿ ಕಡ್ಡಿ ಮಧು ಅವರು ಹೊಸಮನೆ 3 ನೇ ತಿರುವಿನಲ್ಲಿರುವ ಅಂತರಘಟ್ಟಮ್ಮ ದೇವಸ್ಥಾನದ ಬಳಿ ನಿಲ್ಲಿಸಿರುವ ಮಾರುತಿ ಒಮ್ನಿಯನ್ನ ಇದೇ ಗ್ಯಾಂಗ್ ಹಾನಿಗೊಳಿಸಿರುವುದು ದೂರು ದಾಖಲಾಗಿದೆ. ಕೆಎ 14 ಎಂಡಿ 3636 ಕ್ರಮಸಂಖ್ಯೆ ವಾಹನವನ್ನ ಹಾಳುಮಾಡಿರುವುದಾಗಿ ಕಡ್ಡಮಧು ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ-https://suddilive.in/archives/11469