ಕ್ರೈಂ ನ್ಯೂಸ್
ಬೀಸಿದ ಮಚ್ಚು ನೆತ್ತಿಯ ಮೇಲೆ ಸಿಕ್ಕಿಕೊಂಡಿದ್ದ ಪ್ರಶಾಂತ್ ಆರೋಗ್ಯ ಚೇತರಿಸಿಕೊಂಡಿದ್ದಾರೆ
ಸುದ್ದಿಲೈವ್/ಶಿವಮೊಗ್ಗ
ಬೀಸಿದ ಮಚ್ಚು ನೆತ್ತಿಯ ಮೇಲೆ ತೂಗುಗುವಂತೆ ನಡೆದಿದ್ದ ಹಲ್ಲೆಯಲ್ಲಿ ಗಾಯಗೊಂಡ ವಿದ್ಯಾನಗರದ ಪ್ರಶಾಂತ್ ಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆದಿದೆ.
15 ದಿನಗಳ ಹಿಂದೆ ತರಲಘಟ್ಟದ ತಿರುವಿನಲ್ಲಿ ಸ್ನೇಹಿತರೊಂದಿಗೆ ರಾತ್ರಿ ಊಟಕ್ಕೆ ಹೋದ ವೇಳೆ ಬೀಸಿದ ಮಚ್ಚು ನೆತ್ತಿಯ ಮೇಲೆ ಕೂತಿತ್ತು. ಪ್ರಶಾಂತ್ ಸತ್ತೇ ಹೋಗಿದ್ದಾರೆ ಎಂದು ಭಾವಿಸಲಾಗಿತ್ತು. ಖಾಸಗಿ ಆಸ್ಪತ್ರೆಯಲ್ಲಿ 15 ದಿನ ನಡೆದ ಶಸ್ತ್ರ ಚಿಕಿತ್ಸೆ ನಡೆಸಿ ಪ್ರಶಾಂತ್ ಜವರಾಯನನ್ನೇ ಗೆದ್ದು ಬಂದಿದ್ದಾರೆ
ಸಧ್ಯಕ್ಕೆ ಪ್ರಶಾಂತ್ ಚಿಕಿತ್ಸೆ ಫಲಕಾರಿಯಾಗಿದೆ. ಕೂಲಿ ಜೆಲಸ ಮಾಡಿ ಜೀವನ ಮಾಡುತ್ತಿದ್ದ ಪ್ರಶಾಂತ್ ವೈದ್ಯರ ಪರಿಶ್ರಮದಿಂದ ಚೆನ್ನಾಗಿ ಆಗಿದ್ದಾರೆ.
ಇದನ್ನೂ ಓದಿ-https://suddilive.in/archives/11745