ಈಶ್ವರಪ್ಪನವರ ರ್ಯಾಲಿಯಲ್ಲಿ ಬಳಿಸಿದ ಬೈಕ್ ಮತ್ತು ಚಿಹ್ನೆ ವಿರುದ್ಧ ಎಫ್ಐಆರ್
ಸುದ್ದಿಲೈವ್/ಶಿಕಾರಿಪುರ
ಶಿಕಾರಿಪುರದಲ್ಲಿ ಕೆ.ಎಸ್.ಈಶ್ವರಪ್ಪನವರ ಬೈಕ್ ರ್ಯಾಲಿಯ ವಿರುದ್ಧ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿದೆ.
ಹುಚ್ಚರಾಯ ಸ್ವಾಮಿ ದೇವಸ್ಥಾನದಿಂದ ಗಿಡ್ಡಪ್ಪ ದೇವರ ದೇವಸ್ಥಾನದ ವರೆಗೆ ಹೊರಟ ಬೈಕ್ ರ್ಯಾಲಿಯಲ್ಲಿ ಬಳಸಿರುವ ಬೈಕ್ ಗಳು ಮತ್ತು ಬೈಕ್ ಗಳ ಮೇಲೆ ಓಂ ಚಿಹ್ನೆ ಬಳಸಿರುವುದು ಚುನಾವಣೆ ನೀತಿ ಸಂಹಿತ ಉಲ್ಲಂಘನೆಯಾಗಿದೆ ಎಂದು ದೂರು ದಾಖಲಾಗಿದೆ.
ಮಾ. 24 ರಂದು ಶಿಕಾರಿಪುರ ಪಟ್ಟಣದಲ್ಲಿ ಶ್ರೀ ಕೆ.ಎಸ್.ಈಶ್ವರಪ್ಪನವರ ಪರವಾಗಿ ಬೈಕ್ ರ್ಯಾಲಿ ಚುನಾವಣಾ ಪ್ರಚಾರದ ಪ್ರಯುಕ್ತ ರಾಜು ಜಿ ರವರು ಶಿಕಾರಿಪುರ ಸಹಾಯಕ ಚುನಾವಣಾಧಿಕಾರಿಗಳಿಂದ 10 ಬೈಕ್ ಮತ್ತು 01 ಜಿಪ್ ಗೆ ಅನುಮತಿ ಪಡೆದಿದ್ದರು.
ಆದರೆ ರಾಜು ಜಿ ರವರು 50 ಕ್ಕಿಂತ ಹೆಚ್ಚು ಬೈಕು ಮತ್ತು 04 ಕಾರುಗಳನ್ನು ಬಳಸಿ ಎಂ.ಸಿ.ಸಿ ಕಾನೂನು ಉಲ್ಲಂಘನೆ ಮಾಡಿರುತ್ತಾರೆ, ಮತ್ತು ಬೈಕಗಳ ಮೇಲೆ ಓಂ ಎಂಬ ಸಂಕೇತದ ಬಾವುಟಗಳನ್ನು ಕಟ್ಟಿಕೊಂಡು ರ್ಯಾಲಿ ಮಾಡಿ ಎಂ.ಸಿ.ಸಿ ಕಾನುನೂ ಉಲ್ಲಂಘನೆ ಮಾಡಿರುತ್ತಾರೆಂದು ದೂರಿನ ಮೇರೆಗೆ ಠಾಣಾ ಎನ್.ಸಿ.ನಂ 50/2024 ರಲ್ಲಿ ನೊಂದಾಯಿಸಿಕೊಳ್ಳಲಾಗಿದೆ.
ನಿನ್ನೆ ಪ್ರಕರಣ ಶಿಕಾರಿಪುರದ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ರಾಜು ಅವರ ವಿರುದ್ಧ ದೂರು ದಾಖಲಾಗಿದೆ.
ಇದನ್ನೂ ಓದಿ-https://suddilive.in/archives/11585