ಕ್ರೈಂ ನ್ಯೂಸ್

1 ವರ್ಷದ 3 ತಿಂಗಳ ಮಗು ಸಾವು-ಆಸ್ಪತ್ರೆಯ ವಿರುದ್ಧ ಟಿಸಿಲೊಡೆದ ಕುಟುಂಬಸ್ಥರ ಆಕ್ರೋಶ

ಸುದ್ದಿಲೈವ್/ಶಿವಮೊಗ್ಗ

ನಗರದ ಖಾಸಗಿ ಆಸ್ಪತ್ರೆಯಲ್ಲಿ  ಚಿಕಿತ್ಸೆ ಫಲಕಾರಿಯಾಗದೆ 1 ವರ್ಷದ 3 ತಿಂಗಳ ಮಗುವೊಂದು ಸಾವನ್ನಪ್ಪಿದ್ದು, ಇದು ವೈದ್ಯರ ನಿರ್ಲಕ್ಷದಿಂದ ಮಗು ಸಾವನ್ನಪ್ಪಿದೆ ಎಂದು ಕುಟುಂಬ ಆರೋಪಿಸಿ ಆಸ್ಪತ್ರೆಯ ಮುಂಭಾಗದಲ್ಲಿಯೇ ಪ್ರತಿಭಟನೆ ನಡೆಸಿದೆ.

ನಿನ್ನೆ ಗುರುವ ಎಂಬ ಭದ್ರಾವತಿಯ 1 ವರ್ಷದ 3 ತಿಂಗಳ ಮಗುವೊಂದು ಕಫ ಹೆಚ್ಚಾಗಿ ಉಸಿರಾಟಕ್ಕೆ ತೊಂದರೆಯ ಹಿನ್ಬಲೆಯಲ್ಲಿ ನಗರದ ಪ್ರತಿಷ್ಠೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಇಂದು ಸಂಜೆ ಸಾವನ್ನಪ್ಪಿದೆ.

ಮಗುವಿಗೆ ಓವರ್ ಡೌಸ್ ಮೆಡಿಸಿನ್ ನೀಡಿದ ಕಾರಣ ಮಗು ಸಾವನ್ನಪ್ಪಿದೆ ಎಂಬ ಆರೋಪವನ್ನ‌ ಕುಟುಂಬ ಮಾಡಿದೆ. ಮಗುವನ್ನ ಸೇರಿಸಿಕೊಳ್ಳುವಾಗ ಅಧಿಕ ಹಣವನ್ನೂ ನೀಡಲಾಗಿದೆ. ಆದರೆ ನಿರ್ಲಕ್ಷ್ಯದಿಂದ ಮಗು  ಸಾವನ್ನಪ್ಪಿದ್ದು ಇದಕ್ಕೆ ಆಸ್ಪತ್ರೆಯ ಆಡಳಿತ ಮಂಡಳಿಯೇ ಕಾರಣ ಎಂದು ಆರೋಪಿಸಲಾಗಿದೆ.

ಸ್ಣತಳದಲ್ಲಿಯೇ ಡಿಹೆಚ್ ಒ ಡಾ.ರಾಜೇಶ್ ಸುರಗೀಹಳ್ಳಿ ನೊಂದ ಕುಟುಂಬಸ್ಥರು ಕರೆ ಮಾಡಿದ್ದರು. ಅನ್ಯಾಯವಾಗಿದೆ ನ್ಯಾಯಕೊಡಿಸಿ ಎಂದು ಕೋರಿದ್ದರು. ಆದರೆ ಬೇರೆ ಊರಿನಲ್ಲಿರುವುದರಿಂದ ಟಿಹೆಚ್ ಒ ಸ್ಥಳಕ್ಕೆ ಭೇಟಿ ನೀಡುವುದಾಗಿ ಭರವಸೆ ನೀಡಿದರು.

ಸ್ಥಳಕ್ಕೆ 112 ಪೊಲೀಸ್ ಭೇಟಿ ನೀಡಿದೆ. ಮಗುವನ್ನು ಕಳೆದುಕೊಂಡ ಆಕ್ರೋಶ ಭರಿತ ಕುಟುಂಬ ಆಸ್ಪತ್ರೆಯ ಮುಂಭಾಗದಲ್ಲಿ ಧರಣಿ ಕುಳಿತಿದ್ದಾರೆ. ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.

ಇದನ್ನೂ ಓದಿ-https://suddilive.in/archives/7984

Related Articles

Leave a Reply

Your email address will not be published. Required fields are marked *

Back to top button