ಕ್ರೈಂ ನ್ಯೂಸ್

ಮತ್ತೂರಿನಲ್ಲಿ ಬೆಂಕಿ ಅವಘಡ

ಸುದ್ದಿಲೈವ್/ಶಿವಮೊಗ್ಗ

ಕಾರು ಶೆಡ್ ಗೆ ಬೆಂಕಿ, ಶೆಡ್ ನಲ್ಲಿದ್ದ ಕಾರು, ಅಡಕೆ ಚೀಲ ಮತ್ತು ತೆಂಗಿನ ಕಾಯಿಗಳು ಬೆಂಕಿಗಾಹುತಿ ಆಗಿದೆ. ಶಿವಮೊಗ್ಗ ತಾಲೂಕಿನ ಮತ್ತೂರು ಗ್ರಾಮದಲ್ಲಿ ಬೆಂಕಿ ಅವಘಡದ ಘಟನೆ ನಡೆದಿದೆ.

ಮತ್ತೂರು ಗ್ರಾಮದ ಬಾಬಯ್ಯ ಎಂಬುವರಿಗೆ ಸೇರಿದ ಸಣ್ಣ ಗೋದಾಮಿನಲ್ಲಿ ನಿಲ್ಲಿಸಿದ್ದ ಸ್ವಿಫ್ಟ್ ಕಾರು, ಅಡಿಕೆ ಚೀಲಗಳು ಮತ್ತು ತೆಂಗಿನ ಕಾಯಿಗಳು ಬೆಂಕಿಗೆ ಆಹುತಿಯಾಗಿದೆ. ಈ ಅವಘಡಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಶಂಕೆ ವ್ಯಕ್ತವಾಗಿದೆ.

ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ತುಂಗಾನಗರ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಬೆಂಕಿ ನಂದಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳದಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ನಷ್ಟಗಳನ್ನ ಲೆಕ್ಕಹಾಕಬೇಕಿದೆ.

ಇದನ್ನೂ ಓದಿ-https://suddilive.in/archives/9260

Related Articles

Leave a Reply

Your email address will not be published. Required fields are marked *

Back to top button