ನೋ ಪೊಲಿಟಿಕಲ್ ಸ್ಟ್ರ್ಯಾಟರ್ಜಿ, ಒನ್ಲಿ ಹಾರ್ಟ್ ಸ್ಟ್ರಾಟರ್ಜಿ-ನಟ ಡಾ.ಶಿವರಾಜ್ ಕುಮಾರ್
ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದಲ್ಲಿ ನಟ ಶಿವರಾಜ್ ಕುಮಾರ್ ಮತ್ತು ಪತ್ನಿ ಗೀತ ಶಿವರಾಜ್ ಕುಮಾರ್ ಇಂದು ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು.
ಶಿವಮೊಗ್ಗದಲ್ಲಿ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಕಳೆದ ಐದು ದಿನಗಳಿಂದ ಪ್ರಚಾರದಲ್ಲಿದ್ದೇನೆ. ಜನ ಈ ಬಾರಿ ಬದಲಾವಣೆ ಬಯಸಿದ್ದಾರೆ ಎಂದು ತಿಳಿಸಿದರು. ಮೊದಲಿಗೆ ಬಂದಾಗ ವಿಶ್ವಾಸ ಮೂಡಿತ್ತು.
ಕಾರ್ರಯಕ್ರಮದಲ್ಲಿ ಎಷ್ಟು ಜನ ಭಾಗಿಯಾಗಿದ್ದಾರೆ ಎಂಬುದು ಮುಖ್ಯವಲ್ಲ. ಹೇಗೆ ಪ್ರತಿಕ್ರಿಯಿಸಿದ್ದಾರೆ ಎಂಬುದು ಮುಖ್ಯ ಈ ಬಾರಿ ಜನ ಬದಲಾವಣೆ ಬಯಸಿದ್ದಾರೆ. ಕರ್ನಾಟಕದಲ್ಲಿ ಮಹಿಳೆಯರಿಗೆ ರಾಜಕಾರಣದಲ್ಲಿ ಯಾಕೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿಲ್ಲ ಎಂಬ ಪ್ರಶ್ನೆಯನ್ನ ತಮಿಳುನಾಡಿನಲ್ಲಿ ಕೇಳಿದ್ದಾರೆ.
ಆದರೆ ಕಾಂಗ್ರೆಸ್ ನಲ್ಲಿ 6 ಮಹಿಳೆಯರು ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಇನ್ನೂ ಹೆಚ್ವು ಜನ ಬರಬೇಕು ಎಂಬುದು ನನ್ನ ಆಶಯ. ಈ ಬಾರಿ ಯಾವುದೇ ರಾಜಕೀಯತಂತ್ರಗಾರಿಕೆ ಇಲ್ಲ. ಹಾರ್ಟ್ ಸ್ಟ್ರ್ಯಾಟರ್ಜಿ ಎಂದರು.
ಗೀತಾರ ಪರವಾಗಿ ಪ್ರಚಾರ ಮಾಡುತ್ತಿರುವುದಾಗಿ ಬಿಜೆಪಿ ನಿಮ್ಮ ವಿರುದ್ಧ ಆಯೀಗಕ್ಕೆ ದೂರು ನೀಡಿದೆ ಎಂಬ ಮಾಧ್ಯಮದ ಪ್ರಶ್ನೆಗೆ ಇದರ ಬಗ್ಗೆ ನನಗೆ ಗೊತ್ತಿಲ್ಲ. ಐಟಿ ಸೆಲ್ ನೋಡಿಕೊಳ್ಳುತ್ತದೆ. ಶೋಭಾ ಕರದ್ಲಾಂಜೆ ಅಶ್ಇನಿ ಪುನೀತ್ ರಾಜ್ ಕುಮಾರ್ ಅವರನ್ನ ಭೇಟಿ ಆಗಿದ್ದಾರೆ ಎಂಬ ಪ್ರಶ್ನೆಗೂ ಉತ್ತರಿಸಿದ ಅವರು ಭೇಟಿಯಾಗಲಿ ಅದರಲ್ಲಿ ತಪ್ಪೇನಿಲ್ಲ ಎಂದರು. ಎಂದು
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಮಾತನಾಡಿ, ಪ್ರಚಾರದಲ್ಲಿ ವಿಶ್ವಾಸ ಮೂಡಿದೆ. ಉತ್ತಮಪ್ರತಿಕ್ರಿಯೆ ದೊರೆಯುತ್ತಿದೆ ಎಂದರು.
ಕಾರ್ಯತಂತ್ರ ಏನಿಲ್ಲ. ಶಿವಮೊಗ್ಗದಲ್ಲಿ ಐದನೇ ಚುನಾವಣೆ ಎದುರಿಸುತ್ತಿದ್ದೇನೆ. ಕೇವಲ ಗ್ಯಾರೆಂಟಿ ಮೇಲೆ ಚುನಾವಣೆ ಎದುರಿಸುತ್ತಿಲ್ಲ. ಸರ್ಕಾರ ಬಹಳ ಸ್ಕೀಮ್ ತರುತ್ತಿದೆ. ಹಳೆಯ ಪಕ್ಷ ಸಿದ್ದಾಂತಗಳನ್ನ ಫಾಲೋ ಮಾಡುತ್ತಿರುವೆ ಎಂದರು.
ಮಧು ಬಂಗಾರಪ್ಪ ಬಳ ಸಹಕಾರಿದೆ. ಮಧು ಕೆಲಸ ಮಾಡುತ್ತಿರುವುದು ನೋಡಿದರೆ ತಂದೆ ನೆನಪಾಗುತ್ತದೆ ಎಂದು ಹೇಳಿದರು.
ನಂತರ ವಿಮಾನ ನಿಲ್ದಾಣದಿಂದ ಸಂತೆಕಡೂರಿನವರೆಗೆ ಬೈಕ್ ರ್ಯಾಲಿಗಳ ಮೂಲಕ ನಟ ಮತ್ತು ಕಾಂಗ್ರೆಸ್ ಅಭ್ಯರ್ಥಿ ಗೀತಾರನ್ನ ಕರೆತರಲಾಯಿತು.
ಇದನ್ನೂ ಓದಿ-https://suddilive.in/archives/11399