ಸಿನಿಮಾ ಸುದ್ದಿಗಳು

ಹಾರನಹಳ್ಳಿಯಲ್ಲಿ ಶಿವಣ್ಣನ‌ ಹವ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ಗ್ರಾಮಾಂತರ ಭಾಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತ ಶಿವರಾಜ್ ಕುಮಾರ್ ಮಿಂಚಿನ ಪ್ರಚಾರ ಕೈಗೊಂಡಿದ್ದಾರೆ.

ಮೊನ್ನೆ ಹೊಳೆಹೊನ್ನೂರಿನಲ್ಲಿ ಪ್ರಚಾರ ಕೈಗೊಂಡ ಗೀತ ಶಿವರಾಜ್ ಕುಮಾರ್ ಮತ್ತು ನಟ ಶಿವರಾಜ್ ಕುಮಾರ್ ಇಂದು ಹಾರನಹಳ್ಳಿಯಲ್ಲಿ ಪ್ರಚಾರ ನಡೆಸಿದ್ದಾರೆ.

ವೇದಿಕೆ ಮೇಲೆ ಭಾಷಣ ನಡೆಸಿದ ಅಭ್ಯರ್ಥಿ ಗೀತ ಶಿವರಾಜ್ ಕುಮಾರ್, ಸಂಸದರಾಗಿ‌ ಆಯ್ಕೆಯಾದ ನಂತರ ರೈತರಿಗೆ ಬೆಂಬಲ ಬೆಲೆ ಕೊಡಿಸೋದು ನನ್ನ‌ ಜವಬ್ದಾರಿ, ಹಾರನಹಳ್ಳಿಯಲ್ಲಿ ರೈಲು ನಿಲುಗಡೆ ಇಲ್ಲ. ರೈಲು ನಿಲುಗಡೆ ಕೊಡಿಸುವುದಾಗಿ ಭರವಸೆ ನೀಡಿದರು. ಒಂದು ಅವಕಾಶ ಕೊಡಿ, ಕೆಲಸ ಮಾಡಿತೋರಿಸುವುದಾಗಿ ಗೀತಾ ಶಿವರಾಜ್ ಕುಮಾರ್ ತಿಳಿಸಿದರು.

ನಂತರ ಮಾತನಾಡಿದ ನಟ ಸಿವರಾಜ್ ಕುಮಾರ್, ರಾಜಕೀಯ ಬೇಡ ಎಂದು ದೂರ ಇರುವೆ. ಗೀತರ ಗಂಡನಾಗಿ ಇಲ್ಲಿ ಬಂದಿರುವೆ. ಗೀತಾರಿಗೆ ರಾಜಕೀಯ ಅವರ ಬ್ಲಡ್ ನಲ್ಲಿದೆ. 38 ವರ್ಷ ನನ್ನ ಜೊತೆ ಸಂಸಾರ ಮಾಡಿದ್ದಾರೆ. ಈಗ ರಾಜಕೀಯಕ್ಕೆ ಧುಮುಕಿದ್ದಾರೆ. ಮತದ ಮೂಲಕ ಸಹಾಯ ಮಾಡಿ ಎಂದು ಕೋರಿದರು.

ನಾನು ಬಂದ ಮೇಗಲೆ ಗೆದ್ದು ಬಿಡ್ತಾರೆ ಎಂಬ ಭ್ರಮೆ ಇಲ್ಲ. ನೀವು ಸಿನಿಮಾನೋಡಿದರೆ ಅಷ್ಟೆ ನಾವೆಲ್ಲಾ ಸಿನಿಮಾ ಸ್ಟಾರ್ ಇಲ್ಲ ಅಂದರೆ ಸಪರೇಟ್ ಸ್ಟಾರ್ ಆಗ್ತೀವಿ ಎಂದ ಶಿವಣ್ಣ
ಸೇವೆ ಮಾಡಲು ಅವಕಾಶಕೊಡಿ, ಮಹಿಳೆಯಾಗಿ ಸ್ಪರ್ಧಿಸುತ್ತಿದ್ದಾರೆ. ಯಾಕೆ ನಿಮ್ಮ ತಂಗಿ, ತಾಯಿ ಎಂದು ಭಾವಿಸಿ ಗೆಲ್ಲಿಸಬಾರದು ಎಂದು ಶಿವಣ್ಣ ಪ್ರಶ್ನಿಸಿದರು. ಮೋಟಿವ್ ಗೆ ಚುನಾವಣೆ ಸ್ಪರ್ಧಿಸಬೇಕು. ಗೆಲ್ಲುತ್ತೇವೆ ಎಂಬ ಭಾವದಿಂದ ಗೀತ ಸ್ಪರ್ಧಿಸುತ್ತಿಲ್ಲ. ಮೋಟಿವ್ ಇದ್ದರೆನೆ ಮುಂದೆ ಗೆಲವು ಎಲ್ಲಾ ಎಂದರು.

ನಂತರ ಅಭಿಮಾನಿಗಳ ಒತ್ತಾಯಕ್ಕೆ ಮಣಿದು, ನಾನೆಂದು ನಿಮ್ಮವನು ನಿಮಗಾಗಿ ಬಂದವನು ಎಂದ ಶಿವಣ್ಣ, ಏ ಡಾಲಿ ಸುಮ್ನೆ‌ಬಂದರೆ ಅತಿಥಿ, ಹುಡ್ಕೊಂಡು ಬಂದರೆ ನಿನ್ನ ತಿಥಿ ಎಂಬ ಡೈಲಾಗ್ ಹೇಳಿದರು.‌

ಇದನ್ನೂ ಓದಿ-https://suddilive.in/archives/11593

Related Articles

Leave a Reply

Your email address will not be published. Required fields are marked *

Back to top button