ಕ್ರೈಂ ನ್ಯೂಸ್
ಮೃತ ಮುತ್ತಣ್ಣನ ಕುಟುಂಬಕ್ಕೆ ಸಚಿವರ ಅಭಯ ಹಸ್ತ!
ಸುದ್ದಿಲೈವ್/ಶಿವಮೊಗ್ಗ
ಸೀಮಂತಕ್ಕೆ ತೆರಳುತ್ತಿದ್ದ ವೇಳೆ ಅಶೋಕ್ ಲೈಲ್ಯಾಂಡ್ ವಾಹನ ಪಲ್ಟಿಯಾದ ಪರಿಣಾಮ ಒಙದು ಸಾವು ಮತ್ತು 19 ಜನರು ಗಾಯಗೊಂಡು ಮೆಗ್ಗಾನ್ ಗೆ ದಾಖಾಗಿದ್ದರು. ಇವರ ಆರೋಗ್ಯವನ್ನ ಸಚಿವರು ವಿಚಾರಿಸಿದರು.
ಅದರಂತೆ ಇಂದು ವೀರಣ್ಣನಲೇಔಟ್ ನಲ್ಲಿ ಮೂತ್ರ ವಿಸರ್ಜನೆಗೆ ತೆರಳಿದ ವೇಳೆ ಸ್ಲ್ಯಾಬ್ ಮೈಮೇಲೆ ಬಿದ್ದು ಸಾವುಕಂಡಿದ್ದ ಮುತ್ತಣ್ಣನಕುಟುಂಬದವರ ಸಂಕಷ್ಟಕ್ಕೆ ಸಚಿವರು ಸ್ಪಂಧಿಸಿದ್ದಾರೆ.
ಮೊದಲಿಗೆ ಮೃತ ಮುತ್ತಣ್ಣನ ಕುಟುಂಬವನ್ನ ಭೇಟಿಯಾದ ಸಚಿವರು ಅಭಯ ಹಸ್ತ ಚಾಚಿದ್ದಾರೆ. ಪಾಲಿಕೆಗೆ ಈ ಪ್ರಕರಣ ಸಂಬಂಧ ಪಡದಿದ್ದರೂ ಪಾಲಿಕೆಯ ವತಿಯಿಂದ ಪರಿಹಾರ ಮತ್ತು ಔಟ್ ಸೋರ್ಸ್ ಕೆಲಸಕ್ಕೆ ಸಚಿವರು ಕೊಡಿಸುವುದಾಗಿ ಭರವಸೆ ನೀಡಿರುವುದು ಕುಟುಂಬಕ್ಕೆ ಸಹಾಯವಾಗಿದೆ.
ನಂತರ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿರುವ ವೃದ್ಧರು, ಮಹಿಳೆಯರ ಆರೋಗ್ಯ ವಿಚಾರಿಸಿದ್ದಾರೆ.
ಇದನ್ನೂ ಓದಿ-https://suddilive.in/archives/7994