ಸ್ಥಳೀಯ ಸುದ್ದಿಗಳು

ವ್ಯಕ್ತಿಯ ನೆತ್ತಿಯ ಮೇಲೆ ಕೂತಿತ್ತು ಬೀಸಿದ ಮಚ್ಚು

ಸುದ್ದಿಲೈವ್/ಶಿವಮೊಗ್ಗ

ಹರಿಗೆಗೆ ಊಟಕ್ಕೆ ತೆರಳಿದಾಗ ಮಾರಕಾಸ್ತ್ರಾದಿಂದ ವ್ಯಕ್ತಿಯ ಮೇಲೆ ಹಲ್ಲೆ ನಡೆದಿದೆ. ತಲೆಯ ಮೇಲೆ ಮಚ್ಚು ಬೀಸಿದ ಕಾರಣ ಮಚ್ಚು ನೆತ್ತಿಯಲ್ಲಿಯೇ ಸಿಕ್ಕಿಕೊಂಡಿದೆ. ಹಲ್ಲೆಯಿಂದ ಗಾಯಗೊಂಡವನ ಸ್ಥಿತಿ ಗಂಭೀರವಾಗಿದೆ.

ಬಾರ್ ಬೈಂಡಿಂಗ್ ಮೇಸ್ತ್ರಿಯಾಗಿರುವ ಪ್ರಶಾಂತ್ (40) ಎಂಬುವರು ಏಳು ಜನ ಸ್ನೇಹಿತರೊಂದಿಗೆ ಊಟಕ್ಕೆ ತೆರಳಿದಾಗ ಮೊಬೈಲ್ ಗೆ ಕರೆ ಬಂದಿದೆ. ಈ ಹಿನ್ನಲೆಯಲ್ಲಿ ತನ್ನ ವಿಳಾಸ ತಿಳಿಸಿದ್ದಾನೆ. ವಿಳಾಸ ತಿಳಿಸಿದ ಬೆನ್ನಲ್ಲೇ ಬಂದ ವ್ಯಕ್ತಿ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ ಎಂಬ ಮಾಹಿತಿ ಸ್ಥಳೀಯರು ತಿಳಿಸಿದ್ದಾರೆ.

ಗಾಯಗೊಂಡ ಪ್ರಶಾಂತ್(40) ನನ್ನ ಮೆಗ್ಗಾನ್ ಗೆ ಕರೆತರಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಪರಿಚಯಸ್ಥನಿಂದಲೇ ಬಂದ ಕರೆಯಿಂದ ಈ ಕೃತ್ಯ ನಡೆದಿದೆ ಎಂದು ಹೇಳಲಾಗುತ್ತಿದೆ. ಇವಿಷ್ಟು ಪ್ರಾಥಮಿಕ ವರದಿಯಾಗಿದೆ.

ಗಾಯಗೊಂಡಿರುವ ವ್ಯಕ್ತಿ ಪ್ರಶಾಂತ್ ಸ್ಥಿತಿ ಗಂಭೀರವೆಂದು ಹೇಳಲಾಗುತ್ತಿದೆ. ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿ ಹರಿಗೆಯಲ್ಲಿ ಈವಘಟನೆ ನಡೆದಿದೆ.

ಇದನ್ನೂ ಓದಿ-https://suddilive.in/archives/10944

Related Articles

Leave a Reply

Your email address will not be published. Required fields are marked *

Back to top button