ಸ್ಥಳೀಯ ಸುದ್ದಿಗಳು
ಭಾರತೀಯ ರೈಲು ಬಗ್ಗೆ ಜನಜಾಗೃತಿ
ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದಲ್ಲಿ ಭಾರತೀಯ ರೈಲು ಕುರಿತು ಜನಜಾಗೃತಿ ಮೂಡಿಸಲಾಗಿದೆ. ಶಿವಮೊಗ್ಗದ ಬಾಳೆಕೊಪ್ಪದಲ್ಲಿ ಶಾಲಾ ಮಕ್ಕಳಿಗೆ ಜನಜಾಗೃತಿ ಮೂಡಿಸಲಾಗಿದೆ.
ಶಿವಮೊಗ್ಗದ ರೈಲುಗಳಿಗೆ ರೈತರ ಜಾನುವಾರುಗಳು ಸಿಲುಕಿ ಸಾವನ್ನಪ್ಪಿರುವುದು, ರೈಲ್ವೆ ಕ್ರಾಸಿಂಗ್ ನಲ್ಲಿ ಜಾಗೃತೆಯಾಗಿ ರೈಲ್ವೆ ಕ್ರಾಸ್ ಮಾಡುವ ಬಗ್ಗೆ ಜಾಗೃತಿ ಮೂಡಿಸಲಾಗಿದೆ.
ಜಿಲ್ಲೆಯಲ್ಲಿ 2023 ನೇ ಇಸವಿಯಲ್ಲಿ 100 ಕ್ಕೂ ಹೆಚ್ಚು ಜಾನುವಾರುಗಳು ಚಲಿಸುತ್ತಿರುವ ರೈಲುಗಳಿಗೆ ಸಿಲುಕಿ ಸಾವನ್ನಪ್ಪಿದೆ. 59 ಕ್ಕೂ ಹೆಚ್ಚು ಜಾನುವಾರು ಅಪಘಾತದ ಪ್ರಕರಣ ದಾಖಲಾಗಿರುವುದು ತಿಳಿದು ಬಂದಿದೆ.
ಈ ಹಿನ್ನಲೆಯಲ್ಲಿ ಮಕ್ಕಳಲ್ಲಿ, ರೈತರಲ್ಲಿ ರೈಲುಗಳ ಜಾಗೃತಿ ಮೂಡಿಸಿರುವುದು ಮಹತ್ವ ಪಡೆದುಕೊಂಡಿದೆ ದೇವಸ್ಥಾನ, ಶಾಲೆಗಳಲ್ಲಿ ಮತ್ತು ಜನ ಹೆಚ್ಚು ಜಂಗುಳಿ ಇರುವ ಸ್ಥಳಗಳಲ್ಲಿ ರೈಲ್ವೆ ಆರ್ಪಿ ಎಫ್ ಪೊಲೀಸರು ಜಾಗೃತಿ ಮೂಡಿಸಿದ್ದಾರೆ.
ಇದನ್ನೂ ಓದಿ-https://suddilive.in/archives/9666