ಸ್ಥಳೀಯ ಸುದ್ದಿಗಳು

ಸಂಧಾನ ವಿಫಲ-ಪಕ್ಷ ಶುಧ್ದೀಕರಣವಾಗಬೇಕಿದೆ ಎಂದ್ರು ಈಶ್ವರಪ್ಪ

ಸುದ್ದಿಲೈವ್/ಶಿವಮೊಗ್ಗ

ರಾಜ್ಯದ ಉಸ್ತುವಾರಿ ರಾಧ ಮೋಹನ್ ಅಗರ್ ವಾಲ್ ಬಿಜೆಪಿ ಸಂಘಟನಾ ಕಾರ್ಯದರ್ಶಿ ರಾಜೇಶ್ ಬಂದಿದ್ದರು. ಚರ್ಚೆ ಮಾಡಿದ್ದಾರೆ.ನಾನು ಏಕೆ ಸ್ಪರ್ಧೆ ಮಾಡ್ತಿದ್ದೀನಿ‌ ಅಂತಾ ಹೇಳಿದ್ದೇನೆ. ಪಕ್ಷ ಶುದ್ದೀಕರಣವಾಗಬೇಕು ಎಂದು ಮಾಜಿ ಡಿಸಿಎಂ ಈಶ್ವರಪ್ಪ ಗುಡುಗಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿ ಕಾಂತೇಶ್ ಗೆ ಎಂಎಲ್ ಸಿ ಕೊಡ್ತೀವಿ ಎನ್ನುವ ಆಪರ್ ನೀಡಿದ್ರು, ಆದರೆ ಪಕ್ಷ ಅಪ್ಪ ಮಕ್ಕಳ ಕೈಯಲ್ಲಿದೆ ಪಕ್ಷ ಶುದ್ದಿ ಆಗಬೇಕು ಎಂದು ಹೇಳಿದರು.ನಾನು ಸ್ಪರ್ಧೆ ಮಾಡ್ತೀನಿ‌ ಒತ್ತಾಯ ಮಾಡಬೇಡಿ ಅಂದಿದ್ದೇನೆ.ಹಿಂದುತ್ವದ ‌ನಾಯಕರನ್ನು ತುಳಿಯುತ್ತಿದ್ದಾರೆ ಅಂತಾ ತಿಳಿಸಿದ್ದೇನೆ ಎಂದರು.

ನಾನು ಚುನಾವಣೆಯಲ್ಲಿ ಗೆಲ್ಲುತ್ತೇನೆ. ಮೋದಿ ಅವರಿಗೆ ಬೆಂಬಲ ಕೊಡ್ತೀನಿ. ಹಿಂದುತ್ವದ ಪರ ಇದ್ದಿದ್ದಕ್ಕೆ ಹಿಂದುಗಳು ಕೈ ಹಿಡಿಯುತ್ತಿದ್ದಾರೆ. ಯಡಿಯೂರಪ್ಪ ಕುಟುಂಬ ತನ್ನ ಹಿಡಿತಕ್ಕೆ ಹಿಡಿದುಕೊಂಡಿದ್ದಾರೆ. ನಾನು‌ ಬಿಜೆಪಿ ನಿಷ್ಠಾವಂತ ಕಾರ್ಯಕರ್ತ ಇದಕ್ಕಾಗಿ ಎಲ್ಲರೂ ಸರಿ ಹೋಗ್ತಾರೆ ಅಂತಿದ್ದಾರೆ. ಆದರೆ ಈ ಬಾರಿ ಸ್ಪರ್ಧೆ ಖಚಿತ ಎಂದರು.

ವಿಜಯೇಂದ್ರ ಅವರನ್ನ 6 ತಿಂಗಳು ಕಾದು ಹಠ ಹಿಡಿದು ರಾಜ್ಯಾಧ್ಯಕ್ಷ ಮಾಡಿದ್ರು. ಸಿಟಿ ರವಿಯನ್ನ ಯಾಕೆ ರಾಜ್ಯಾಧ್ಯಕ್ಷನಾಗಿ ಮಾಡಲಿಲ್ಲ. ಶೋಭಾ ಕರಂದ್ಲಾಜೆಗೆ ಹಠ‌ಹಿಡಿದು ಟಿಕೆಟ್ ಕೊಡಿಸಿದರು. ಸಿಟಿ ರವೆಗೆ ಕೊಡಿಸಲಿಲ್ಲ. ಹೋರಾಟ ನಡೆಸುತ್ಯಿರುವದೇ ಬಿಜೆಪಿಯ ಬದಲಾವಣೆಗಾಗಿ. ನಾನು ಗೆದ್ದೇ ಗೆಲ್ಲುತ್ತೇನೆ ಎಂದರು.

ಇದನ್ನೂ ಓದಿ-https://suddilive.in/archives/10905

Related Articles

Leave a Reply

Your email address will not be published. Required fields are marked *

Back to top button