ರಾಷ್ಟ್ರೀಯ ಸುದ್ದಿಗಳು

ಕಾನ್ ಸ್ಟೇಬಲ್ ನಿಂದ ಜಾಗೃತಿಗಾಗಿ ಬೈಕ್ ರೈಡಿಂಗ್

ಶಿವಮೊಗ್ಗ ಬ್ರೇಕಿಂಗ್..

ಪೊಲೀಸ್ ಕಾನ್ಸ್‌ಟೇಬಲ್ ಒಬ್ಬರು ಬೈಕ್ ರೈಡ್ ಮೂಲಕ ಜನ ಜಾಗೃತಿಗೆ ಇಳಿದಿದ್ದಾರೆ. ಸಂವಿಧಾನದ 75ನೇ ವರ್ಷದ ಆಚರಣೆಯ ಅಂಗವಾಗಿ ಸಂವಿಧಾನ ಜಾಗೃತಿ ಜಾಥಾಕ್ಕಾಗಿ ಬೈಕ್ ರೈಡ್ ಹೊರಟಿದ್ದಾರೆ.

ಶಿವಮೊಗ್ಗದಿಂದ ದೇಶದ ಹಲವು ರಾಜ್ಯಗಳಿಗೆ ಬೈಕ್ ರೈಡ್ ಕೈಗೊಂಡಿರುವ ಕಾನ್ಸ್‌ಟೇಬಲ್ ಸತೀಶ್ ಶಿವಮೊಗ್ಗದ ಮಹಿಳಾ ಠಾಣೆಯಲ್ಲಿ ಜೀಪ್ ಚಾಲಕನಾಗಿರುವ ಕಾನ್ಸ್‌ಟೇಬಲ್ ಕೆಲಸ ಮಾಡುತ್ತಿದ್ದಾರೆ. ಇಂದಿನಿಂದ ಸುಮಾರು 4 ಸಾವಿರ ರೈಡಿಂಗ್ ನಡೆಸಲಿದ್ದಾರೆ.

ಮಾನವ ಕಳ್ಳ ಸಾಗಾಣೆ, ಪೋಕ್ಸೋ ಪ್ರಕರಣ, ನಾಗರೀಕ‌ ಕರ್ತವ್ಯ ಮತ್ತು ಹಕ್ಕು, ಸಂಚಾರ ನಿಯಮ ಪಾಲನೆ, ಬೇಟಿ ಪಡಾವೋ, ಬೇಟಿ ಬಚವೋ ಕುರಿತು ಜಾಗೃತಿ ಮೂಡಿಸುವುದು ಅವರ ಬೈಕ್ ರೈಡ್ ನ ಮೂಲ ಉದ್ದೇಶವಾಗಿದೆ. ಬೈಕ್ ರೈಡಿಂಗ್ ಮೂಲಕ ದೇಶದ 10 ರಾಜ್ಯಗಳನ್ನ ಕಾನ್ ಸ್ಟೇಬಲ್  ಸಂಚರಿಸಲಿದ್ದಾರೆ.

ರಾಯಲ್ ಎನ್ ಫೀಲ್ಡ್ ಬೈಕ್ ನಲ್ಲಿ ರೈಡಿಂಗ್ ಮೂಲಕ ಜಾಗೃತಿ ಮೂಡಿಸಲಿದ್ದಾರೆ. ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಜಾಗೃತಿ ಮೂಢಿಸುವುದು ಈ ಬೈಕ್ ರೈಡಿಂಗ್ ನ ಉದ್ದೇಶವೂ ಆಗಿದೆ. ಶಾಲೆಗಳ ಬಳಿ, ಸಾರ್ವಜನಿಕ ಸ್ಥಳಗಳ ಬಳಿ ಕರಪತ್ರ ಮತ್ತು ಸ್ಟಿಕ್ಕರ್ ಅಂಟಿಸುವುದು ಜಾಗೃತಿಯ ಅಂಶವಾಗಿದೆ.

15 ದಿನಗಳ ಕಾಲ ಜಾಗೃತಿ ರೈಡಿಂಗ್ ಗೆ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯಲಾಗಿದೆ. ಅನುಮತಿ ಪಡೆದು ಸತೀಶ್ ದೇಶ ಪರ್ಯಟನೆ ಕೈಗೊಂಡಿದ್ದಾರೆ. ದೇಶ ಪರ್ಯಟನೆ ತೆರಳಿದ ಕಾನ್ಸ್‌ಟೇಬಲ್ ಗೆ ಸಾರ್ವಜನಿಕರಿಂದ ಆಲ್ ದಿ ಬೆಸ್ಟ್ ವಿಶಸ್ ದೊರೆತಿದೆ.

ಇದನ್ನೂ ಓದಿ-https://suddilive.in/archives/9037

Related Articles

Leave a Reply

Your email address will not be published. Required fields are marked *

Back to top button