ಪಿಎಸ್ ಐ ಮಂಜುನಾಥ್ ಕುರಿಯ ವರ್ಗಾವಣೆ ಪರಿಣಾಮ ನಿನ್ನೆ ಗಲಾಟೆ-ಗುರುಮೂರ್ತಿ ಗುಡುಗು
ಸುದ್ದಿಲೈವ್/ಶಿವಮೊಗ್ಗ
ನಿನ್ನೆ ದೊಡ್ಡಪೇಟೆಯ ವಿಠಲ ದೇವಸ್ಥಾನದ ಬಳಿ ಸುಶೀಲ್ ಎಂಬ ಯುವಕನನ್ನ ಚಾಕುವಿನಿಂದ ಇರುದಿರುವುದನ್ನ ಖಂಡಿಸಿ ಹಾಗೂ ಆರೋಪಿಗಳನ್ನ ಶೀಘ್ರವೇ ಬಂಧಿಸುವಂತೆ ಆಗ್ರಹಿಸಿ ಸಂಸದ ರಾಘವೇಂದ್ರ ಅವರ ನೇತೃತ್ವದಲ್ಲಿ ಶಿಕಾರಿಪುರ ಟೌನ್ ಪೊಲೀಸ್ ಠಾಣೆಯ ಎದುರು ಭರ್ಜರಿ ಪ್ರತಿಭಟನೆ ನಡೆಸದಿದೆ.
ಹಿಂದೂಗಳಿಗೆ ರಕ್ಷಣೆ ಕೊಡದ ಸರ್ಕಾರಕ್ಕೆ ದಿಕ್ಕಾರ, ದೇಶ ಪ್ರೇಮಿಗಳ ವಿರುದ್ಧ ದೇಶ ದ್ರೋಹ ಪಟ್ಟಕಟ್ಟುತ್ತಿರುವುದಾಗಿ, ಧರ್ಮ ರಕ್ಷಕರಿಗೆ ಭಯೋತ್ಪಾದಕ ಪಟ್ಟ ಕಟ್ಟುತ್ತಿರುವ ಸರ್ಕಾರಕ್ಕೆ ದಿಕ್ಕಾರ ಎಂಬ ಪ್ಲಕಾರ್ಡ್ ಹಿಡಿದು ಠಾಣೆ ಎದುರು ಪ್ರತಿಭಟನಾಕಾರರು ಧರಣಿ ಕುಳಿತಿದ್ದಾರೆ.
ಠಾಣೆಯ ಎದುರು ಪೊಲೀಸರಿಗೆ ತಾಕತ್ತಿದೆಯಾ ಹಿಂದೂಗಳ ಮೇಲೆ ಕೇಸ್ ಹಾಕಿ ಎಂದು ಬಿಜೆಪಿಯ ಗುರುಮೂರ್ತಿ ಸವಾಲು ಎಸೆದಿದ್ದಾರೆ ಷಂಡ ಸರ್ಕಾರ ಎಂದು ಕಾಂಗ್ರೆಸ್ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಮತ್ತೊಂದು ಸರ್ಕಾರ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದರೆ ನಗೆ ಪಾಟಲು ಅಲ್ಲವೇ ಎಂದು ದೂರಿದರು.
ತುಷ್ಠೀಕರಣದ ಪರಿಣಾಮ ಮುಸ್ಲೀಂ ಯುವಕರು ಹಿಂದೂ ಯುವಕರ ಮೇಲೆ ದಾಳಿ ನಡೆಸುತ್ತಿದ್ದಾರೆ. ಬಿಲಾಲ್ ಎಂಡ್ ಸಹಚರರ ವಿರುದ್ಧ ಏಉ ಕ್ರಮ ಕೈಕೊಂಡ್ರಿ ? ಶಿಕಾರಿಪುರದಲ್ಲಿ ಬಿಎಸ್ ವೈ ಶಾಂತಿ ಕಾಪಾಡಿಕೊಂಡಿದ್ದರು. ಆದರೆ ಅದನ್ನ ನಿಮ್ಮ ಸರ್ಕಾರದ ಅವಧಿಯಲ್ಲಿ ಕದಡುವ ಕೆಲಸ ಮಾಡ್ತಾ ಇದ್ದೀರಿ ಎಂದು ಎಚ್ಚರಿಸಿದರು.
ಪಿಎಸ್ಐ ಮಂಜುನಾಥ್ ಕುರಿ ವರ್ಗಾವಣೆಯ ಪರಿಣಾಮ ಗಲಾಟೆ
ಯುವಕನನ್ನ ವೀಲಿಂಗ್ ಮಾಡಬೇಡಿ ಎಂದು ಹೇಳುದ್ದಕ್ಕೆ ಸುಶೀಲ್ ಮನೆಯಿಂದ ಹೊರಗೆ ಇರುವುದನ್ನ ನೋಡಿ ಕಾದು ಕುಲಿತು ಚಾಕು ಇರಿಯಲಾಗಿದೆ. ಶಿರಾಳಕೊಪ್ಪ ಪಿಎಸ್ ಐ ಪರ ಗುರುಮೂರ್ತಿ ಗುಡುಗಿದ್ದಾರೆ. ಮಂಜುನಾಥ್ ಕುರಿಯನ್ನ ಭಂಡ ಕಾಂಗ್ರೆಸ್ ಮುಖಂಡರು ವರ್ಗಾಯಿಸಿದ ಪರಿಣಾಮ ಇಂದು ಹಿಂದೂ ಯುವಕರ ಮೇಲೆಹಲ್ಲೆ ನಡೆಸಿದ್ದಾರೆ. ಸುಶೀಲ್ ಮೇಲೆ ಹಲ್ಲೆಯನ್ನ ತೀವ್ರವಾಗಿ ಖಂಡಿಸುತ್ತೇವೆ ಎಂದು ಗುರುಮೂರ್ತಿ ಆರ್ಭಟಿದಿದ್ದಾರೆ. ಇದು ಎಚ್ಚರಿಕೆಯ ಗಂಟೆ ಎಂದು ಗುಡುಗಿದ್ದಾರೆ.
ಆರೋಪಿಗಳು ಪಾಕಿಸ್ತಾನಕ್ಕೆ ಹೋಗಿದ್ದಾರಾ?
ಸುಶೀಲ್ ಗೆ ಹಲ್ಲೆ ನಡೆಸಿದ್ದ ಇಬ್ಬರು ಆರೊಪಿಗಳನ್ನ ಬಂಧಿಸಿರುವುದಾಗಿ ತಿಳಿದು ಬಂದಿದೆ. ಉಳಿದವರು ಪಾಕ್ ಗೆ ಹೋಗಿದ್ದಾರಾ?ಶೀಘ್ರವೇ ಬಂಧಿಸಿ ಎಂದು ಆಗ್ರಹಿಸಿದರು.
ಇದನ್ನೂ ಓದಿ-https://suddilive.in/archives/8573