ರಾಷ್ಟ್ರೀಯ ಸುದ್ದಿಗಳು
ಜಿಲ್ಲಾ ಹೆಚ್ಚುವರಿ ರಕ್ಷಣಾಧಿಕಾರಿಗೆ ರಾಷ್ಟಪತಿ ಪ್ರಶಸ್ತಿ
ಸುದ್ದಿಲೈವ್/ಶಿವಮೊಗ್ಗ
2023 ನೇ ಸಾಲಿನ ರಾಷ್ಟ್ರಪತಿ ಪದಕ ಶಿವಮೊಗ್ಗ ಜಿಲ್ಲಾ ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿಗೆ ದೊರೆತಿದೆ.
ಕರ್ನಾಟಕದ 18 ಜನರಿಗೆ ಈ ಪ್ರಶಸ್ತಿ ದೊರೆತಿದ್ದು, ಅದರಲ್ಲಿ ಶಿವಮೊಗ್ಗ ಜಿಲ್ಲಾ ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿಗ ರಾಷ್ಟ್ರಪತಿ ಪ್ರಶಸ್ತಿ ಲಭಿಸಿದೆ. ಅವರ 30 ವರ್ಷದ ಸೇವೆಯನ್ನ ಗುರುತಿಸಿ ಪ್ರಶಸ್ತಿ ನೀಡರುವುದಾಗಿ ತಿಳಿದುಬಂದಿದೆ. .
ಪಿಎಸ್ಐ ಆಗಿ ಸೇರ್ಪಡೆಗೊಂಡಿದ್ದ ಅನಿಲ್ ಕುಮಾರ್ ಭೂಮರೆಡ್ಡಿ ಈಗ ಅಡಿಷನಲ್ ಎಸ್ಪಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನೂ ನಾಲ್ಕು ವರ್ಷ ಸೇವೆ ಬಾಕಿ ಇರುವಾಗ ರಾಷ್ಟ್ರಪತಿ ಪ್ರಶಸ್ತಿ ದೊರೆತಿದೆ. ಅನಿಲ್ ಕುಮಾರ್ ಭೂಮರೆಡ್ಡಿ ಮೂಲತಃ ಗದಗ ಜಿಲ್ಲೆಯವರು.
ಇದನ್ನೂ ಓದಿ-https://suddilive.in/archives/7635