ಕ್ರೈಂ ನ್ಯೂಸ್

ಮೆಗ್ಗಾನ್ ವಾರ್ಡ್ ನಿಂದ ರೋಗಿ ನಾಪತ್ತೆ

ಸುದ್ದಿಲೈವ್/ಶಿವಮೊಗ್ಗ

ಮಾಧ್ಯಮಗಳನ್ನ‌ ಹಾಗೂ ಜನಸಾಮಾನ್ಯರನ್ನ ಗೇಟಿನ ಅಂಚಿನಲ್ಲೇ ನಿಯಂತ್ರಿಸುವ ಮೆಗ್ಗಾನ್ ಆಸ್ಪತ್ರೆ ರೋಗಿಗಳನ್ನ ಸರಿಯಾಗಿ ನೋಡಿಕೊಳ್ಳುವ ವಿಷಯದಲ್ಲಿ ಹಿಂದುಳಿದಿದೆಯಾ ಎಂಬ ಚರ್ಚೆಯ ಮಧ್ಯೆಯೇ ರೋಗಿಯೊಬ್ಬ ಮೆಗ್ಗಾನ್ ವಾರ್ಡ್ ನಿಂದ ನಾಪತ್ತೆಯಾಗಿದ್ದಾನೆ.

ಮಾಧ್ಯಮಗಳು ಸುದ್ದಿಗಾಗಿ ಮೆಗ್ಗಾನ್ ಬಂದರೆ  ಪ್ರವೇಶವಿಲ್ಲ ಎಂದು ಹೇಳುವ ಮೆಗ್ಗಾನ್ ಆಡಳಿತ ಮಂಡಳಿ ಒಬ್ಬ ರೋಗಿ ವಾರ್ಡ್ ನಿಂದ ಕಣ್ಣರೆಯಾದರೂ ಕಣ್ಮುಚ್ಚಿಕೊಂಡು ಕುಳಿತಿದೆಯಾ ಎಂಬ ಪ್ರಶ್ನೆ ಸಹಜವಾಗಿ ಕೇಳಬೇಕಿದೆ. ಹೀಗೆ ಪ್ರಶ್ನಿಸುವ ಮೂಲಕ ಸುದ್ದಿಮಾಡಿದಾಗ ಆಡಳಿತ ಮಂಡಳಿ ಸೆಕ್ಯೂರಿಟಿ ಟೈಟ್ ಮಾಡಿಬಿಡಬಹುದು. ಹೂ ಕೇರ್ಸ್?

ಭದ್ರಾವತಿಯ ಹರೀಶ ಎಂಬುವರಿಗೆ ಅನಾರೋಗ್ಯ ಹಿನ್ನಲೆಯಲ್ಲಿ ಭದ್ರಾವತಿ ಜಿಹೆಚ್ ಬಿ ಆಸ್ಪತ್ರೆಯಿಂದ ಕರೆದುಕೊಂಡು ಬಂದು ದಿನಾಂಕ 09-01-2024 ರಂದು ಜಿಲ್ಲಾ ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗೋಸ್ಕರ ಅಡ್ಮಿಟ್ ಮಾಡಲಾಗಿತ್ತು. ಇವರಿಗೆ ಜಾಂಡೀಸ್ ಖಾಯಿಲೆ ಇರುವುದರಿಂದ ಚಿಕಿತ್ಸೆ ಕೊಡಿಸುತ್ತಿದ್ದು,

ಹರೀಶ್  ಜ.17 ರಂದು  ಸುಮಾರು 04.30 ಪಿಎಂ ಗಂಟೆಗೆ 122 ವಾರ್ಡ್ ನಿಂದ ಎದ್ದು ಹೋಗಿದ್ದಾರೆ.‌ ಜಾಂಡೀಸ್ ರೋಗಿ ಇದುವರೆಗೂ ವಾಪಾಸ್ಸಾಗಿಲ್ಲ. ಕುಟುಂಬದವರೆಲ್ಲಾ ಕಡೆಹುಡುಕಾಡಿದರೂ ಸಹ ಸಿಗಲಿಲ್ಲ, ಈ ಬಗ್ಗೆ ಯುವಕನ ಚಿಕ್ಕಮ್ಮ ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ-https://suddilive.in/archives/7214

Related Articles

Leave a Reply

Your email address will not be published. Required fields are marked *

Back to top button