ಶೈಕ್ಷಣಿಕ ಸುದ್ದಿಗಳು

ರಾಷ್ಟ್ರೀಯ ಶಿಕ್ಷಣ ನೀತಿಗೆ ಒತ್ತುನೀಡಲು ಅಭಿಯಾನ

ಸುದ್ದಿಲೈವ್/ಶಿವಮೊಗ್ಗ

ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಅಬಿಯಾನ ನಡೆಯುತ್ತಿದೆ. ಕರ್ನಾಟಕ ಸರ್ಕಾರ ತೆಗೆದುಕೊಂಡ ನಿರ್ಧಾರದ ಬಗ್ಗೆ ಪೀಪಲ್ಸ್ ಫೋರಂ ಫಾರ್‌ ಕರ್ನಾಟಕ  ಅಭಿಯಾನ ನಡೆಸಲು ಯೋಜಿಸಲಾಗಿದೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಎಂಎಲ್ ಸಿ ಡಿ.ಎಸ್.ಅರುಣ್, ಸಮಾವೇಶ, ಸಹಿ ಸಂಗ್ರಹ, 168 ತಾಲೂಕು ಗಳಲ್ಲಿ ಸಹಿ ಸಂಗ್ರಹವಾಗಿದೆ. 83 ಸಾವಿರ ಆಡಳಿತ ಮಂಡಳಿಯ ಸದಸ್ಯರು ಮತ್ತು ಮಕ್ಕಳು ಭಾಗಿಯಾಗಿದ್ದರು. ಆನ್ ಲೈನ್ ನಲ್ಲಿ 19323 ಜನ ಸಹಿ ಹಾಕಿದ್ದಾರೆ. ಒಟ್ಟು 1016080 ಜನ ಅಭಿಯಾನದದ ಸಹಿ ಸಂಗ್ರಹದಲ್ಲಿ ಭಾಗಿಯಾಗಿದ್ದಾರೆ.

1968, 1984 ರಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಗೊಂಡಾಗ ಯಾವ ವಿರೋಧವಾಗಿರಲಿಲ್ಲ. ಆದರೆ 2023 ಕ್ಕೆ ಈ ಶಿಕ್ಷಣ ನೀತಿ ತರುವಾಗ ವಿರೋಧಯಾಕೆ? 2018 ರಲ್ಲಿ ಪಬ್ಲಿಕ್ ಡೊಮೆನ್ ನಲ್ಲಿ ಚರ್ಚಿ ನಡೆಸಲಾಗಿತ್ತು. ವಿರೋಧಯಾಕೆ ಎಂಬುದರ ಬಗ್ಗೆ ಕಾರಣ ಹೇಳಲಾಗುತ್ತಿಲ್ಲ ಎಂದು ದೂರಿದರು.

ನೀತಿ ಅಷ್ಟೆ‌ ಆದರೆ  ಅಭಿಯಾನ ಜಾರಿ ತರುವಾಗ ವಿರೋಧಿಸಲಾಗಿದೆ. ಕರ್ನಾಟಕದಲ್ಲಿ ಎಸ್ ಇಪಿ ತರುವುದಾಗಿ ಹೇಳಿ ತರಲಿಲ್ಲ. ಆದರೆ ರಾಷ್ಟ್ರೀಯ ಶಿಕ್ಷಣ ವಿಚಾರದಲ್ಲಿ  ಚರ್ಚೆ ಯಾದ ಎನ್ ಇಪಿ ಜಾರಿಗೊಳಿಸಿದ್ದರೂ ಸರಿಯಾಗಿಲ್ಲ.

ಉನ್ನತ ಶಿಕ್ಷಣ ಸಚಿವರಾದ ಸುಧಾಕರ್ ಮೂಲಭೂತ ಸೌಕರ್ಯದ ಕೊರತೆ ಬಗ್ಗೆ ಮಾತನಾಡುತ್ತಾರೆ. ಆದರೆ ಯಾವುದಾದರೂ ಕೊರತೆಯ ಬಗ್ಗೆ ಎಲ್ಲೂ ದಾಖಲಾತಿಕೊಡುತ್ತಿಲ್ಲ. ರಾಜಕೀಯ ಉದ್ದೇಶ ಇದರಲ್ಲಿ ಎದ್ದುಕಾಣುತ್ತಿದೆ. ಐದು ರಾಜ್ಯಗಳಲ್ಲಿ ಎನ್ ಇಪಿ ಅಳವಡಿಸಿಕೊಳ್ಳಲಾಗಿದೆ. ಆಂಧ್ರ ಮತ್ತು‌ ಬಿಜೆಪಿಯಲ್ಲಿ ಎನ್ ಇಪಿ ಇದೆ. ಎರಡೂ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವಿಲ್ಲ ಆದರೂ ಜಾರಿಯಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ-https://suddilive.in/archives/7099

Related Articles

Leave a Reply

Your email address will not be published. Required fields are marked *

Back to top button