ರಾಜಕೀಯ ಸುದ್ದಿಗಳು
ಸಚಿವ ಮಧು ಬಂಗಾರಪ್ಪ ದುಂಡಾವರ್ತನೆ ಕೈ ಬಿಡಬೇಕು-ಹರತಾಳಹಾಲಪ್ಪ
ಸುದ್ದಿಲೈವ್/ಶಿವಮೊಗ್ಗ
ಭಾರತ ವಿಕಸಿತ್ ಯಾತ್ರೆಯಲ್ಲಿ ಅಧಿಕಾರಿಗಳು ಭಾಗವಹಿಸದಂತೆ ಸಚಿವ ಮಧು ಬಂಗಾರಪ್ಪನವರು ಸೂಚಿಸಿದ್ದು ದುಂಡಾವರ್ತನೆ ಮೆರೆದಿದ್ದಾರೆ ಎಂದು ಮಾಜಿ ಸಚಿವ ಹರತಾಳ ಹಾಲಪ್ಪ ಆರೋಪಿಸಿದ್ದಾರೆ.
2019 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ವೇಳೆ ಹಾಗೂ 2023 ರ ಚುನಾವಣೆಯಲ್ಲಿ ಸೋತ ನಂತರ ಸುದ್ದಿಗೋಷ್ಠಿ ನಡೆಸದಿದ್ದ ಮಾಜಿ ಸಚಿವರು ಮೊದಲಬಾರಿಗೆ ಶಿವಮೊಗ್ಗದಲ್ಲಿ ಸುದ್ದಿಗೋಷ್ಟಿ ನಡೆಸಿ ಸಂಚಲ ಮೂಡಿಸಿದ್ದಾರೆ.
ಒಕ್ಕೂಟದ ವ್ಯವಸ್ಥೆಯಲ್ಲಿರುವ ನಾವು ಇರುವುದರಿಂದ ವಿಕಾಸ್ ಯಾತ್ರೆಗೆ ಅಧಿಕಾರಿಗಳು ಭಾಗಿಯಾಗದಿರುವಂತೆ ಸಚಿವ ಮಧು ಬಂಗಾರಪ್ಪ ಸೂಚಿಸಿರುವುದು ದುರಂತ. ಇಂತಹ ದುಙಡಾವರ್ತನೆ ಕೈಬಿಡಬೇಕೆಂದು ಮನವಿ ಮಾಡಿಕೊಂಡರು.
ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ವಿವರಗಳನ್ನ ತಿಳಿಸುವ ಭಾರತ ವಿಕಾಸಿತ ಯಾತ್ರೆಗೆ ನಿನ್ನೆ ಸೊರಬದಲ್ಲಿ ಅಧಿಕಾರಿಗಳ ಸಭಯಲ್ಲಿ ವಿಕಸಿತ ಯಾತ್ರೆಗೆಹೋದಂತೆ ಆದೇಶಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು.
ಇದನ್ನೂ ಓದಿ-https://suddilive.in/archives/7088