ರಾಜಕೀಯ ಸುದ್ದಿಗಳು
ಭಾವನ ವತಿಯಿಂದ ಸಂಕ್ರಾಂತಿ ಹಬ್ಬ ಆಚರಣೆ
ಸುದ್ದಿಲೈವ್/ಶಿವಮೊಗ್ಗ
ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಶಿವಮೊಗ್ಗ ಭಾವನ ವತಿಯಿಂದ “ಸಂಕ್ರಾಂತಿ ಸಂಭ್ರಮ” ಸಂಕ್ರಾಂತಿ ಹಬ್ಬದ ಆಚರಣೆಯನ್ನು ವಿಜೃಂಭಣೆಯಿಂದ ಸಾಂಪ್ರದಾಯಿಕ ಬದ್ಧವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿದ್ದ ಸುಗ್ಗಿ ಹಾಡುಗಳ ಗಾಯನ ಸ್ಪರ್ಧೆಯಲ್ಲಿ, ವರದ ತಂಡ ಪ್ರಥಮ, ಕಾವೇರಿ ತಂಡ ದ್ವಿತೀಯ ಹಾಗೂ ಗಂಗಾ ತಂಡ ತೃತೀಯ ಬಹುಮಾನವನ್ನು ಪಡೆದರು.
ಭಾವನಾದ ಅಧ್ಯಕ್ಷೆ ಸೀನಿಯರ್ ಸುರೇಖಾ ಮುರುಳಿಧರ್, ಪುಷ್ಪಾ ಶೆಟ್ಟಿ, ಮೃದುಲಾ ಮಂಜುನಾಥ್, ಉಮಾ ಚಂದ್ರಪ್ಪ , ಭವಾನಿ ಶಶಿಧರ್, ಉಮಾ ಮೂರ್ತಿ, ವಾಸಂತಿ, ಶೋಭಾ, ಜಯಲಕ್ಷ್ಮಿ ಚಂದ್ರಹಾಸ, ಇನ್ನೂ ಹಲವಾರು ಸದಸ್ಯರು ಒಡಗೂಡಿ ಸಂಭ್ರಮಿಸಿದರು.
ಇದನ್ನೂ ಓದಿ-https://suddilive.in/archives/6910