ಕ್ರೈಂ ನ್ಯೂಸ್

ನದಿಯಲ್ಲಿ ಸ್ನಾನಕ್ಕೆ ಇಳಿದಿದ್ದ ಯುವಕ ಸಾವು

ಸೊರಬ ತಾಲೂಕಿನ ತಲಗಡ್ಡೆ ಸಮೀಪ ನದಿಗೆ ಸ್ನಾನಕ್ಕೆ ಇಳಿದ ಯುವಕ ಸಾವಾಗಿದ್ದಾನೆ.ಅಗ್ನಿಶಾಮಕದಳದ ಸಿಬ್ಬಂದಿಗಳ 6 ಗಂಟೆಯ ಸತತ ಪ್ರಯತ್ನದಿಂದ ನೀರುಪಾಲಗಿದ್ದ ಯುವಕ ಪ್ರವೀಣ್ ಶವಪತ್ತೆಯಾಗಿದೆ.

ಸುದ್ದಿಲೈವ್/ಸೊರಬ ಜ.15

ಮಕರ ಸಂಕ್ರಾಂತಿ ಹಿನ್ನೆಲೆ ನದಿಗೆ ಸ್ನಾನಕ್ಕೆ‌ಇಳಿದ ಯುವಕನೊಬ್ಬ ನೀರಿನಲ್ಲಿ‌ ಮುಳುಗಿ ಮೃತಪಟ್ಟ ಘಟನೆ ತಾಲೂಕಿನ ಆನವಟ್ಟಿ ಹೋಬಳಿಯ ತಲಗಡ್ಡೆ ಸಮೀಪ ವರದಾ ನದಿಯಲ್ಲಿ ಸೋಮವಾರ ನಡೆದಿದೆ.

ಹಾನಗಲ್ಲ ತಾಲೂಕಿನ ನಿಟಗಿನಕೊಪ್ಪ ಗ್ರಾಮದ ಪ್ರವೀಣ್ (25) ಮೃತ ಯುವಕ. ತಲಗಡ್ಡೆ ಸಮೀಪದ ದೇವಸ್ಥಾನಕ್ಕೆಂದು ಕುಟುಂಬ ಸಮೇತರಾಗಿ ಆಗಮಿಸಿದ್ದ ವೇಳೆ, ನದಿಯಲ್ಲಿ‌ ಸ್ನಾನಕ್ಕೆ ಇಳಿದ ಪ್ರವೀಣ್ ನೀರಿನಲ್ಲಿ‌ ಮುಳುಗಿ ಮೃತಪಟ್ಟಿದ್ದಾನೆ. ವಿಷಯ ತಿಳಿದು‌ ಅಗ್ನಿಶಾಮಕ ಠಾಣೆ ಸಿಬ್ಬಂದಿ ಸತತ ಆರು ತಾಸು‌ ಶೋಧ ಕಾರ್ಯ ನಡೆಸಿ, ಯುವಕನ ಶವವನ್ನು ನದಿಯಿಂದ ಮೇಲೆತ್ತಿದ್ದಾರೆ.
ಆನವಟ್ಟಿ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ-https://suddilive.in/archives/6902

Related Articles

Leave a Reply

Your email address will not be published. Required fields are marked *

Back to top button