ರಾಷ್ಟ್ರೀಯ ಸುದ್ದಿಗಳು

ಅಗತ್ಯ ಬಿದ್ದರೆ ಹೋರಾಟಕ್ಕೂ ಸಿದ್ದ ಎಂದ್ರು ಹಿರಿಯ ಸಾಹಿತಿಗಳು…!

ಸುದ್ದಿಲೈವ್/ಶಿವಮೊಗ್ಗ

ಮತ್ತೆ ಶರಾವತಿ ನೀರನ್ನ ಬೆಂಗಳೂರಿಗೆ ಪೂರೈಸುವ ವಿಷಯ ಮುನ್ನೆಲೆಗೆ ಬರುತ್ತಿದ್ದಂತೆ ಸರ್ಕಾರದ ವಿರುದ್ಧ ಆಕ್ರೋಶಗಳು ಹೊರಬೀಳುತ್ತಿವೆ. ಸರ್ಕಾರದ ಶಾಸಕರಾಗಿರುವ ಬೇಳೂರು ಗೋಪಾಲಕೃಷ್ಣರವರೆ ಒಂದು ರೀತಿಯಲ್ಲಿ ವಿರೋಧ ವ್ಯಕ್ತಪಡಿಸಿರುವ ಬೆನ್ನಲ್ಲೇ ಸಾಹಿತಿ ಹಾಗೂ ಹಿರಿಯರಾದ ನಾಡಿಸೋಜಾ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

2017 ರ ಸಮಯದಲ್ಲಿ ಡಿಪಿಆರ್ ಆಗಿ ಶರಾವತಿ ನದಿ ನೀರನ್ನ ಕುಡಿಯಲು ಬೆಂಗಳೂರಿಗೆ ಕಳುಹಿಸುವ ಯೋಜನೆ ತಯಾರಾಗಿತ್ತು, ಈ ಪ್ರೊಜೆಕ್ಟ್ ವಿರುದ್ಧ ಆಗಲೆ ವಿರೋಧವಾಗಿತ್ತು. ತದನಂತರ ಬಂದಿದ್ದ ಬಿಜೆಪಿ ಸರ್ಕಾರ ಈ ಯೋಜನೆಯನ್ನ ಕೈಬಿಟ್ಟಿತ್ತು. ಸುಮಾರು ಐದಾರು ವರ್ಷ ಆರಾಮಾಗಿದ್ದ ಸಾಗರದ ಜನರ ನಿದ್ದೆಯನ್ನ ಈ ಯೋಜನೆ ಮತ್ತೆ ನಿದ್ದೆಗೆಡೆಸುವಂತೆ ಮಾಡಿದೆ.

2028ಕ್ಕೆ ಬೆಂಗಳೂರಿಗೆ ಶರವಾತಿ ನೀರು ಪೂರೈಕೆಗೆ ಚಿಂತನೆ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಸಾಹಿತಿ ನಾಡಿಸೋಜಾ ವಿರೋಧ ವ್ಯಕ್ತಪಡಿಸಿದ್ದಾರೆ. ಹಿರಿಯ ಸಾಹಿತಿ ಹಾಗೂ ಶರಾವತಿ ಉಳಿಸಿ ಹೋರಾಟ ಸಮಿತಿಯ ಗೌರವಾಧ್ಯಕ್ಷರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾವುದೇ ಅಗ್ರಿಮೆಂಟ್ ಮಾಡಿಕೊಡುವುದು ಬೇಕಾಗಿಲ್ಲ. ಶರಾವತಿ ನದಿ ನೀರು ಮುಟ್ಟಲು ಬಿಡುವುದಿಲ್ಲ. ವಿದ್ಯುತ್ ಹೆಚ್ಚಿಸಲು ಚಿಂತನೆ ಮಾಡುವುದು ಬಿಟ್ಟು ನೀರು ಬೇರೆ ಕಡೆ ತೆಗೆದುಕೊಂಡು ಹೋಗುವ ಚಿಂತನೆ ಮಾಡುತ್ತಿರುವ ಬಗ್ಗೆ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.

ಮುಖ್ಯಮಂತ್ರಿಗಳು ಈ ಚಿಂತನೆಯನ್ನು ಬಿಟ್ಟುಬಿಡಬೇಕು. ಅನಿವಾರ್ಯ ಬಂದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು.  ಸಮಿತಿಯ ಗೌರವಾಧ್ಯಕ್ಷರು ಡಾ ನಾ ಡಿಸೋಜ ಗುಡುಗಿದ್ದಾರೆ.

ಇದನ್ನೂ ಓದಿ-https://suddilive.in/archives/6875

Related Articles

Leave a Reply

Your email address will not be published. Required fields are marked *

Back to top button