ರಾಷ್ಟ್ರೀಯ ಸುದ್ದಿಗಳು

ಕೂಚ್ ಬೆಹಾರ್ ಕ್ರಿಕೆಟ್ ಫೈನಲ್ ಪಂದ್ಯಾವಳಿ ಶಿವಮೊಗ್ಗದಲ್ಲಿ


ಸುದ್ದಿಲೈವ್/ಶಿವಮೊಗ್ಗ

ಕೂಚ್ ಬೆಹಾರ್  ಕ್ರಿಕೆಟ್ ಟ್ರೋಫಿ ಜ.12 ರಿಂದ ಆರಂಭವಾಗಲಿದ್ದು ನಾಲ್ಕುದಿನ ನಡೆಯುವ ಈ ಕ್ರಿಕೆಟ್ ಫೈನಲ್ ಪಂದ್ಯಾವಳಿ ಕರ್ನಾಟಕ ಮತ್ತು ಮುಂಬೈ ತಂಡಗಳ ನಡುವೆ ನಡೆಯಲಿದೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಕೆಎಸ್ ಸಿಎ ಶಿವಮೊಗ್ಗ ವಲಯ ಸಂಚಾಲಕ ಸದಾನಂದ್ ಹೆಚ್ ಎಸ್, ಕೆಎಸ್ ಸಿಎ ಮುಖ್ಯ ಮೈದಾನದಲ್ಲಿ ಅಫ್ಘಾನ್ ಮತ್ತು ಭಾರತದ ನಡುವೆ ಕ್ರಿಕೆಟ್ ಪಂದ್ಯಾವಳಿ ನಡೆಯಲಿರುವುದರಿಂದ ಶಿವಮೊಗ್ಗದಲ್ಲಿ ಕೂಚ್ ಬೆಹರ್ ಪಂದ್ಯಾವಳಿ ಟ್ರೋಫಿ ಫೈನಲ್ ಪಂದ್ಯಾವಳಿ ನಡೆಯಲಿದೆ ಎಂದರು.

ಇದು  19 ವರ್ಷದ ವಯೋಮಾನದೊಳಗಿನ ಪಂದ್ಯಾವಳಿಯಾಗಿದೆ. ಜ.12 ರಿಂದ 15 ರ ವರೆಗೆ ಪಂದ್ಯಾವಳಿ ನಡೆಯಲಿದೆ. ಈ ಪಂದ್ಯಾವಳಿ ಶಿವಮೊಗ್ಗದ ನವುಲೆಯ ಕೆಎಸ್ ಸಿಎ ಮೈದಾನದಲ್ಲಿ ನಡೆಯಲಿದೆ. ಭಾರತ ಕ್ರಿಕೆಟ್ ತಂಡದ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರ ಮಗ ಸಮಿತ್ ದ್ರಾವಿಡ್ ಕರ್ನಾಟಕ ತಂಡದಲ್ಲಿ ಆಡುತ್ತಿದ್ದಾರೆ.

ಯುವರಾಜ್ ಸಿಂಗ್ ಮೊಹ್ಮದ್ ಕೈಫ್, ಕೊಹ್ಲಿ ಅಂಡರ್ 19‌ಪಂದ್ಯಾವಳಿ ಆಡಿ ಭಾರತ ಕ್ರಿಕೆಟ್ ತಂಡ ಅಯ್ಕೆಯಾಗಿದ್ದಾರೆ. ಹಾಗಾಗಿ ಈ ಪಂದ್ಯಾವಳಿ ಪ್ರಮುಖ ಎನಿಸಿಕೊಳ್ಳಲಿದೆ. ಮುಂದಿನ ತಿಂಗಳು ಶಿವಮೊಗ್ಗದ ನವುಲೆ ಕೆಎಸ್ ಸಿಎ ಮೈದಾನದಲ್ಲಿ ರಣಜಿ ತಂಡ ಶಿವಮೊಗ್ಗದಲ್ಲಿ ನಡೆಯುವ‌ ನಿರೀಕ್ಷೆ ಇದೆ ಎಂದು ತಿಳಿಸಿದರು‌.

ಈಗಾಗಲೇ ಕರ್ನಾಟಕ ಅಂಡರ್ 19 ತಂಡ ಶಿವಮೊಗ್ಗಕ್ಕೆ ಬಂದು ರಾಯಲ್ ಆರ್ಕಿಡ್ ಹೋಟೆಲ್ ನಲ್ಲಿ ಉಳಿದುಕೊಂಡಿದ್ದಾರೆ. ಮುಂಬೈ ತಂಡ ಇಂದು ವಿಮಾನ ನಿಲ್ದಾಣದಲ್ಲಿ ಬಂದಿಳಿಯಲಿದ್ದಾರೆ.

ಮೀಡಿಯಾ‌ಇನ್ಚಾರ್ಜ್ ಕೆಎಲ್ ಸುಬ್ರಹ್ಮಣ್ಯ, ಐಡಿಯಲ್ ಗೋಪಿ, ಅಧ್ಯಕ್ಷ ರಾಜೇಂದ್ರ ಕಾಮತ್ ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/6524

Related Articles

Leave a Reply

Your email address will not be published. Required fields are marked *

Back to top button